UDUPI : ಚಿರತೆ ದಾಳಿ ವ್ಯಕ್ತಿ ಗಂಭೀರ
Friday, June 30, 2023
ಚಿರತೆ ದಾಳಿಯಿಂದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಉಡುಪಿಯ ಕೊಲ್ಲೂರು ಸಮೀಪದ ನಾಗೋಡಿ (ನಿಟ್ಟೂರು) ಘಾಟಿಯ ಕಂಚಿಕೆರೆ ಎಂಬಲ್ಲಿ ನಡೆದಿದೆ.
ಗಣೇಶ್ (48) ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡವರು. ತಡರಾತ್ರಿ 2 ಗಂಟೆಗೆ, ಮನೆ ಮಂದಿ ಸಾಕು ನಾಯಿ ಕೂಗಾಟವನ್ನು ಕೇಳಿ ಎಚ್ಚೆತ್ತಿದ್ದಾರೆ. ಈ ವೇಳೆ ಮನೆ ಯಜಮಾನ ಗಣೇಶ್ (48) ಬಾಗಿಲು ತೆರೆದು ಮನೆಯಿಂದ ಹೊರ ಬಂದಾಗ ಗಣೇಶ್ ಅವರ ಮೇಲೆ ಚಿರತೆ ಎರಗಿದೆ. ಮನೆಯವರ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಬಂದಾಗ ಚಿರತೆ ಹೋಗಿದೆ. ಗಂಭೀರ ಗಾಯಗೊಂಡ ಗಣೇಶ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.