
ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ವತಿಯಿಂದ ವ್ಯಾಕ್ಸಿನ್ ಮಾರಕವಲ್ಲ ಪೂರಕ ಅಂತರ್ಜಾಲ ಅಭಿಯಾನ..
ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ವ್ಯಾಕ್ಸಿನ್ ಮಾರಕವಲ್ಲ ಪೂರಕ ಜನ ಜಾಗೃತಿ ಅಂತರ್ಜಾಲ ಅಭಿಯಾನ ಸಮಾರೋಪಗೊಂಡಿತ್ತು.
ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸನ್ನು ತಡಗಟ್ಟಲು ಸೂಕ್ತ ಪರಿಹಾರ ವ್ಯಾಕ್ಸಿನ್ ಆಗಿದೆ. ಆದರೆ ಇಂದು ಜನರು ಅದಕ್ಕೆ ಭಯ ಭೀತರಾಗಿ ವ್ಯಾಕ್ಸಿನ್ ಅನ್ನು ನಿರ್ಲಕ್ಷಣೆ ಮಾಡುತ್ತಿದ್ದು ಇದರಿಂದ ಜನರಿಗೆ ಜಾಗೃತಿ ಮೂಡಿಸಲು ಜುಲೈ 1ರಂದು ಪ್ರಾರಂಭಗೊಂಡು ಜುಲೈ 5 ರಂದು ಸಮಾಪ್ತಿಗೊಂಡ ಈ ಅಭಿಯಾನಕ್ಕೆ ಹಲವಾರು ಮಂದಿ ಭಾಗವಹಿಸಿ ಅಭಿಯಾನವನ್ನು ಯಶಸ್ಸುಗೊಳಿಸಿದ್ದಾರೆ.
ಖಿದ್ಮಾ ಫೌಂಡೇಶನ್ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಇವರ ವೀಕ್ಷಣೆಯಲ್ಲಿ ಕಾರ್ಯಕ್ರಮ ಮೂಡಿ ಬಂದಿದೆ ಎಂದು ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.