-->

ಮೈಸೂರು ಮೃಗಾಲಯದಲ್ಲಿ ದುರ್ಘಟನೆ; ಮಾವುತನನ್ನೆ ಎತ್ತಿ ಕೆಳಕ್ಕೆ ಹಾಕಿ ತುಳಿದು ಕೊಂದ ಆನೆ

ಮೈಸೂರು ಮೃಗಾಲಯದಲ್ಲಿ ದುರ್ಘಟನೆ; ಮಾವುತನನ್ನೆ ಎತ್ತಿ ಕೆಳಕ್ಕೆ ಹಾಕಿ ತುಳಿದು ಕೊಂದ ಆನೆ


(ಗಲ್ಫ್ ಕನ್ನಡಿಗ) ಮೈಸೂರು; ಮೈಸೂರು ಚಾಮರಾಜೇಂದ್ರ  ಮೃಗಾಲಯದಲ್ಲಿ ಆನೆಯೊಂದು ತನ್ನ ಮಾವುತನನ್ನೆ ಎತ್ತಿ ಕೆಳಕ್ಕೆ ಹಾಕಿ ತುಳಿದು ಕೊಂದ‌ ಘಟನೆ ನಡೆದಿದೆ.

(ಗಲ್ಫ್ ಕನ್ನಡಿಗ)ಮೈಸೂರು ಮೃಗಾಲಯದಲ್ಲಿದ್ದ ಅಭಿ ಎಂಬ ಆನೆ ಈ ದುಷ್ಕೃತ್ಯ ಎಸಗಿದೆ.  ಘಟನೆಯಲ್ಲಿ ಮಾವುತ 38 ವರ್ಷದ ಹರೀಶ್ ಮೃತಪಟ್ಟಿದ್ದಾರೆ. 

(ಗಲ್ಫ್ ಕನ್ನಡಿಗ)ಹರೀಶ್ ಅವರು ಅಭಿ ಆನೆಗೆ ಹುಲ್ಲು ಹಾಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  ಆನೆಯ ಮೈದಡವಿ ಹುಲ್ಲು ಹಾಕುತ್ತಿದ್ದಾಗ  ಹರೀಶ್ ಅವರನ್ನು ಸೊಂಡಿಲಿನಿಂದ ಮೇಲೆತ್ತಿ ಕೆಳಕ್ಕೆ ಹಾಕಿ ತುಳಿದಿದೆ.

(ಗಲ್ಫ್ ಕನ್ನಡಿಗ)ಘಟನೆ ಬಗ್ಗೆ ಮಾಹಿತಿ ತಿಳಿದ ಮೃಗಾಲಯದ ಸಿಬ್ಬಂದಿ ತೀವ್ರ ಗಾಯಗೊಂಡ ಹರೀಶ್ ಅವರನ್ನು  ಆನೆಯಿಂದ ಬಿಡಿಸಿಕೊಂಡು  ಆಸ್ಪತ್ರೆಗೆ ದಾಖಲಿಸಿದ್ದಾರೆ.  ಆದರೆ ಹರೀಶ್ ಅವರು ಚಿಕಿತ್ಸೆ ‌ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

(ಗಲ್ಫ್ ಕನ್ನಡಿಗ)ಮೈಸೂರಿನ ಲಲಿತಾದ್ರಿಪುರ ಗ್ರಾಮದ  ನಿವಾಸಿಯಾಗಿರುವ ಹರೀಶ್ ಅವರು ಮೃಗಾಲಯದಲ್ಲಿ ‌ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಐದು ದಿನಗಳ ರಜೆಗಳ ಬಳಿಕ ನಿನ್ನೆ ಕೆಲಸಕ್ಕೆ ಹಾಜರಾಗಿದ್ದರು.  ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99