-->

 2023ರ ಫೆಬ್ರುವರಿ ವರೆಗೆ ಭತ್ತ ಖರೀದಿಗೆ ಅವಕಾಶ

2023ರ ಫೆಬ್ರುವರಿ ವರೆಗೆ ಭತ್ತ ಖರೀದಿಗೆ ಅವಕಾಶ





ಮಂಗಳೂರು:- ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತೆರೆಯಲಾಗಿದೆ. 2022ರ ಡಿಸೆಂಬರ್ 21ರ ವರೆಗೆ ಕೃಷಿಕರ ಹೆಸರು ನೋಂದಾಯಿಸಲು ಕಾಲಾವಕಾಶ ನೀಡಲಾಗಿದ್ದು, 2023ರ ಫೆಬ್ರವರಿ 28ರ ವರೆಗೆ ಭತ್ತ ಖರೀದಿಗೆ ಅವಕಾಶವಿದೆ.

        ಭತ್ತ ಬೆಳೆದಿರುವ ರೈತರು ತಮ್ಮ ಹತ್ತಿರದಲ್ಲಿರುವ ಮಾರುಕಟ್ಟೆ ಮಹಾಮಂಡಳಿಯನ್ನು ಸಂಪರ್ಕಿಸಬಹುದು.
    ಮಂಗಳೂರು ತಾಲೂಕಿನ ಖರೀದಿ ಕೇಂದ್ರದ ವಿವರ: ವಿಶ್ವನಾಥ್ ಸುಬ್ರಾಯ ಕಾಮತ್ ಅಂಡ್ ಸನ್ಸ್ ಕ್ಯಾಶ್ಯೂ ಫ್ಯಾಕ್ಟರಿ, ಪದವು, ಶಕ್ತಿನಗರ, ಸಂಪರ್ಕಿಬಹುದಾದ ಅಧಿಕಾರಿಗಳು: ಪುಟ್ಟಲಿಂಗಯ್ಯ ಮೊ.ಸಂಖ್ಯೆ: 9448723139, ಸುಜಾತ, ಮೊ.ಸಂಖ್ಯೆ: 9886778396, ಜಿತೇಂದ್ರಿ ಶೆಟ್ಟಿ ಮೊ.ಂಖ್ಯೆ: 9108755069.
     ಮೂಡಬಿದ್ರೆ ತಾಲೂಕು: ದಯಾನಂದ ಮಲ್ಯ ಕಾಂಪೌಂಡ್, ಮೂಡಬಿದ್ರೆ, ಸಂಪರ್ಕಿಬಹುದಾದ ಅಧಿಕಾರಿಗಳು: ಪುಟ್ಟಲಿಂಗಯ್ಯ ಮೊ.ಸಂಖ್ಯೆ: 9448723139, ಶ್ರೇಯಾಂಶ್ ಜೈನ್ ಮೊ.ಸಂಖ್ಯೆ: 9449333732, ಗೌತಮಿ ಮೊ.ಸಂಖ್ಯೆ: 9108609067.
      ಬಂಟ್ವಾಳ ತಾಲೂಕು: ಟಿಎಪಿಸಿಎಂಎಸ್, ಬಂಟ್ವಾಳ, ಸಂಪರ್ಕಿಬಹುದಾದ ಅಧಿಕಾರಿಗಳು: ವಿಜಯ ಮೊ.ಸಂಖ್ಯೆ:9380435485, ಸೌಮ್ಯ ಮೊ.ಸಂಖ್ಯೆ: 9743857388.
    ಬೆಳ್ತಂಗಡಿ ತಾಲೂಕು: ಎಪಿಎಂಸಿ, ಬೆಳ್ತಂಗಡಿ, ಸಂಪರ್ಕಿಬಹುದಾದ ಅಧಿಕಾರಿಗಳು: ರವೀಂದ್ರ ಸಾಲಿಯಾನ್ ಮೊ.ಸಂಖ್ಯೆ: 8861520995, ಶಾಂತಿ ಮೊ.ಸಂಖ್ಯೆ: 7338601072.
ಪುತ್ತೂರು ತಾಲೂಕು: ಎಪಿಎಂಸಿ, ಪುತ್ತೂರು, ಸಂಪರ್ಕಿಬಹುದಾದ ಅಧಿಕಾರಿಗಳು: ಚಂದ್ರಹಾಸ ಮಣಿಯಾಣಿ ಮೊ.ಸಂಖ್ಯೆ: 9019956589, ಅಕ್ಷತಾ ಮೊ.ಸಂಖ್ಯೆ: 9902957809, ಅನುಪಮ ಮೊ.ಸಂಖ್ಯೆ: 9980092713.
    ಸುಳ್ಯ ತಾಲೂಕು: ಎಪಿಎಂಸಿ, ಸುಳ್ಯ, ಸಂಪರ್ಕಿಬಹುದಾದ ಅಧಿಕಾರಿಗಳು: ಚಂದ್ರಹಾಸ ಮಣಿಯಾಣಿ ಮೊ.ಸಂಖ್ಯೆ:9019956589, ಅಕ್ಷತಾ ಮೊ.ಸಂಖ್ಯೆ: 9902957809, ಅನುಪಮ ಮೊ.ಸಂಖ್ಯೆ: 9980092713.
ಭತ್ತ ಖರೀದಿಗೆ ಮಾರ್ಗಸೂಚಿಗಳಿವು:
       ಸರ್ಕಾರದಿಂದ ನೇಮಿಸಲ್ಪಟ್ಟ ಖರೀದಿ ಏಜೆನ್ಸಿಯು ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಎಫ್.ಎ.ಕ್ಯೂ. ಗುಣಮಟ್ಟಗಳನ್ನು ದೃಢೀಕರಿಸಲು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕ್ರೆಗೆ 16 ಕ್ವಿಂಟಾಲ್ ಹಾಗೆ ಗರಿಷ್ಟ 40 ಕ್ವಿಂಟಾಲ್ ಮೀರದಂತೆ ಭತ್ತ ಖರೀದಿಗೆ ಅವಕಾಶವಿದೆ. ಸರ್ಕಾರದಿಂದ ಭತ್ತ ಖರೀದಿಸಲು ರಾಜ್ಯ ಸರ್ಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಏಜೆನ್ಸಿಯಾಗಿ ನೇಮಿಸಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂ.ಗೆ 2,040 ರೂ.ಗಳು ಹಾಗೂ ಗ್ರೇಡ್ ಎ ಭತ್ತಕ್ಕೆ 2,060 ರೂ.ಗಳನ್ನು ನಿಗದಿಪಡಿಸಲಾಗಿದೆ.
 ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಜಯ, ಕಜೆ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂ.ಓ4 ಭತ್ತದ ತಳಿಗಳನ್ನು ರೈತರಿಂದ ಖರೀದಿಸಲಾಗುವುದು. ಭತ್ತವನ್ನು ಮಾರಾಟ ಮಾಡಿದ ರೈತರಿಗೆ 15 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99