-->

Mangaluru-ದಲಿತನ ಹತ್ಯೆಗೆ ನ್ಯಾಯಕೊಡಿ ಎಂದು ಎಸ್ ಡಿಪಿಐನಿಂದ ಬೆಳ್ತಂಗಡಿ-ಮಂಗಳೂರು ಬೃಹತ್ ಜಾಥ: 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

Mangaluru-ದಲಿತನ ಹತ್ಯೆಗೆ ನ್ಯಾಯಕೊಡಿ ಎಂದು ಎಸ್ ಡಿಪಿಐನಿಂದ ಬೆಳ್ತಂಗಡಿ-ಮಂಗಳೂರು ಬೃಹತ್ ಜಾಥ: 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ಮಂಗಳೂರು: ದಲಿತ ಸಮುದಾಯದ ದಿನೇಶ್ ಕನ್ಯಾಡಿ ಎಂಬವರ ಹತ್ಯೆಗೆ ನ್ಯಾಯನೀಡಿ ಎಂದು ಆಗ್ರಹಿಸಿ ಎಸ್​ಡಿಪಿಐನಿಂದ ನಿನ್ನೆ ಬೆಳ್ತಂಗಡಿಯಿಂದ ಮಂಗಳೂರುವರೆಗೆ ಬೃಹತ್ ಜಾಥಾ ನಡೆಯಿತು. ಮಂಗಳವಾರ ಬೆಳಿಗ್ಗೆ 9.30ಗೆ ಬೆಳ್ತಂಗಡಿಯಲ್ಲಿ ಜಾಥಾ ಆರಂಭವಾಗಿ ಸಂಜೆ 5ಗಂಟೆ ಸುಮಾರಿಗೆ ಮಂಗಳೂರು ತಲುಪಿತ್ತು. ಆ ಬಳಿಕ ನಗರದ ಕ್ಲಾಕ್ ಟವರ್ ಬಳಿ‌ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನು‌ ಉದ್ದೇಶಿಸಿ ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಆಡಳಿತ ನಡೆಸುವ ಸರಕಾರವು ಆರೂವರೆ ಕೋಟಿ ಕನ್ನಡಿಗರು ಸಮಾನರೆಂದು ಕಾಣಬೇಕು. ಎಲ್ಲರಿಗೂ ನ್ಯಾಯ, ರಕ್ಷಣೆ ಒದಗಿಸಬೇಕಾದುದು ಸರಕಾರದ ಕರ್ತವ್ಯ. ಆದ್ದರಿಂದ ಈ ಪ್ರತಿಭಟನೆ ಮೂಲಕ ಎಸ್ ಡಿಪಿಐ ಈ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಸರ್ಕಾರಕ್ಕೆ ಬದ್ಧತೆ ಇದ್ದಲ್ಲಿ, ಹತ್ಯೆಯಾದ ದಿನೇಶ್ ಕನ್ಯಾಡಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲದೆ 2.50 ಎಕರೆ ಭೂಮಿ ಹಾಗೂ ಓರ್ವ ಸದಸ್ಯನಿಗೆ ಸರ್ಕಾರಿ ಕೆಲಸ ಕೊಡಬೇಕು. ತಕ್ಷಣ ಹತ್ಯೆ ಆರೋಪಿ ಕೃಷ್ಣ ಎಂಬಾತನ ಜಾಮೀನು ರದ್ದು ಮಾಡಿ ಮತ್ತೆ ಜೈಲಿಗೆ ಕಳಿಸುವಂತೆ ಆಗ್ರಹಿಸಿದರು.


ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದಾಗ ಎಲ್ಲಾ ಬಿಜೆಪಿ ಮುಖಂಡರು ಅವನ ಮನೆಗೆ ಹೋಗುತ್ತಾರೆ‌. ಸರ್ಕಾರದ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡುತ್ತಾರೆ. ಅಂದು ಸಿಎಂ ಬೊಮ್ಮಾಯಿಯವರು ನೀಡಿದ್ದು, ಅವರ ತಂದೆ ಎಸ್.ಆರ್.ಬೊಮ್ಮಾಯಿಯವರ ಹಣ ಅಲ್ಲ. ಅದು ಜನರ ತೆರಿಗೆಯ ಹಣ. ಅಂದು ಹರ್ಷ ಮನೆಗೆ ಹೋದವರು, ಪರಿಹಾರ ಹಣ ನೀಡಿದವರು, ದಿನೇಶ್ ಕನ್ಯಾಡಿ ಮನೆಗೆ ಮಾತ್ರ ಬರುತ್ತಿಲ್ಲ. ಪರಿಹಾರ ಹಣ ನೀಡುತ್ತಿಲ್ಲ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಅಬ್ದುಲ್ ಮಜೀದ್ ದೂರಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99