STATE

ಮಾಲೀಕನ ಜಮೀನಿನಲ್ಲೇ ದುರಂತ ಅಂತ್ಯ ಕಂಡ ಕೂಲಿಗಾರನ ಹೆಣ್ಣು ಮಕ್ಕಳು...

 ಕೊಪ್ಪಳ: ಸ್ನಾನ ಮಾಡಲೆಂದು ಹೋದ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳಿಬ್ಬರು ದುರಂತ ಅಂತ್ಯ ಕಂಡ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ  ನಡೆದಿದೆ. 

ಕವಿತಾ(10) ಮತ್ತು ಸಂಜನಾ‌(9) ಮೃತ‌ ದುರ್ದೈವಿಗಳು. ಇವರ ಪಾಲಕರು ಹುಲಿಹೈದರ ‌ಗ್ರಾಮ‌ ವ್ಯಾಪ್ತಿಯ‌ ವಿಶ್ವನಾಥ‌ ರೆಡ್ಡಿ ‌ಅವರ ಹೊಲದಲ್ಲಿ‌‌ ಕೂಲಿ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ ಬಾಲಕಿಯರಿಬ್ಬರೂ ಹೊಂಡಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. 

ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಟ್ಯಾಗ್‌ಗಳು: STATE