-->

ಮಂಗಳೂರು; ವಿ ಹಿಂ ಪ ಮುಖಂಡ ಶರಣ್ ಪಂಪ್ ವೆಲ್ ಗೆ ವಿದೇಶದಿಂದ ಕರೆ ಮಾಡಿ ಜೀವ ಬೆದರಿಕೆ-  ಕಾರಣ ಇದು

ಮಂಗಳೂರು; ವಿ ಹಿಂ ಪ ಮುಖಂಡ ಶರಣ್ ಪಂಪ್ ವೆಲ್ ಗೆ ವಿದೇಶದಿಂದ ಕರೆ ಮಾಡಿ ಜೀವ ಬೆದರಿಕೆ- ಕಾರಣ ಇದು



ಮಂಗಳೂರು ; ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ವಿದೇಶದಿಂದ ಸ್ಯಾಟಲೈಟ್ ಪೋನ್ ಮೂಲಕ ಜೀವ ಬೆದರಿಕೆ ಬರುತ್ತಿದ್ದು ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶರಣ್ ಪಂಪ್ ವೆಲ್ ಅವರು ಇತ್ತೀಚೆಗೆ ಹಿಂದೂಗಳ ಅಂತ್ಯಸಂಸ್ಕಾರವನ್ನು ಅನ್ಯಧರ್ಮದವರು ಮಾಡುವ ಅವಶ್ಯಕತೆ ಇಲ್ಲ. ಕರಾವಳಿಯಲ್ಲಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುವ ಹಿಂದೂ ಕಾರ್ಯಕರ್ತರ ಪಡೆ ಇದೆ ಎಂದು ಪ್ರಕಟಣೆ ನೀಡಿದ್ದರು. ಈ ಬಳಿಕ ಶರಣ್ ಪಂಪ್ ವೆಲ್ ಅವರ ಮೊಬೈಲ್ ನಂಬರ್ ನೀಡಿ ಸಾಕಷ್ಟು ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶರಣ್ ಅವರ ಹೇಳಿಕೆಗೂ ಪರ ವಿರೋಧ ಚರ್ಚೆಗಳು ಆರಂಭವಾಗಿತ್ತು.



ಈ ಹೇಳಿಕೆ ಬಳಿಕ ಶರಣ್ ಪಂಪ್ ವೆಲ್ ಅವರಿಗೆ ವಿದೇಶದಿಂದ ಸ್ಯಾಟಲೈಟ್ ಪೋನ್ ಕರೆ ಮೂಲಕ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದೆ. ಬೆದರಿಕೆ ಕರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವ ಬಗ್ಗೆ ಶರಣ್ ಪಂಪ್ ವೆಲ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99