-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 ಶರಣ್ ಪಂಪ್ವೆಲ್, ದುರ್ಗಾ ವಾಹಿನಿ ಯುವತಿಯರ ಬಗ್ಗೆ ಅಪಪ್ರಚಾರ- ನಾಲ್ವರ ಬಂಧನ

ಶರಣ್ ಪಂಪ್ವೆಲ್, ದುರ್ಗಾ ವಾಹಿನಿ ಯುವತಿಯರ ಬಗ್ಗೆ ಅಪಪ್ರಚಾರ- ನಾಲ್ವರ ಬಂಧನ




ಮಂಗಳೂರು: ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಗ್ಗೆ ಅಪಪ್ರಚಾರದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ಸುಳ್ಯ ತಾಲೂಕಿನ ಕಸಬಾದ ಭವಾನಿ ಶಂಕರ್ (32), ಮಂಗಳೂರಿನ ಬಜಾಲ್ ನ ನೌಶಾದ್ (27), ಕಾವೂರಿನ ರವಿ ಯಾನೆ ಟೆಕ್ಕಿ ರವಿ (38), ಮೂಡಬಿದ್ರೆ ಧರೆಗುಡ್ಡೆಯ ಜಯಕುಮಾರ್ (33) ಬಂಧಿತರು.






ಘಟನೆ ಹಿನ್ನೆಲೆ: ಇತ್ತೀಚೆಗೆ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶರಣ್ ಪಂಪ್ ವೆಲ್ ಅವರು ಯುವತಿಯೊಂದಿಗೆ ಚಾಟ್ ಮಾಡಿದ್ದರು ಎಂಬಂತೆ ಇರುವ ವಾಟ್ಸಪ್ ಚಾಟ್ ನ ಸ್ಕ್ರೀನ್ ಶಾಟ್ ವೊಂದು ಹರಿದಾಡುತ್ತಿತ್ತು. ಯುವತಿ ಜೊತೆಗೆ ಚಾಟ್ ಮಾಡುತ್ತಾ ಆಕೆಯನ್ನು ಲಾಡ್ಜ್ ಗೆ ಕರೆಯುವುದು , ಹಣ ಕೊಡ್ತೇನೆ ಎನ್ನುವುದು ಜೊತೆಗೆ ದುರ್ಗಾವಾಹಿನಿ ಯುವತಿಯರಿಗೂ ಈ ರೀತಿ ಮಾಡಿದ್ದೇನೆ ಎಂಬಂತೆ ಚಾಟ್ ಮಾಡಲಾಗಿತ್ತು. ಇದನ್ನು ಶರಣ್ ಪಂಪ್ ವೆಲ್ ತೇಜೋವಧೆ ಮಾಡಲು ಸೃಷ್ಟಿಸಲಾಗಿದ್ದು ಈ ಬಗ್ಗೆ ವಿಹಿಂಪ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ದೂರು ನೀಡಿ ಫೇಕ್ ಮೆಸೆಜ್ ಸೃಷ್ಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಶರಣ್ ಪಂಪ್ ವೆಲ್ ಬಗ್ಗೆ ಅಪಪ್ರಚಾರದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ನಾಲ್ವರನ್ನು ಬಂಧಿಸಿದ್ದಾರೆ



ಇದನ್ನು ಓದಿ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99