-->

ಪರಶುರಾಮ ಥೀಮ್ ಪಾರ್ಕ್‌ ಅವ್ಯವಹಾರ: ಸಿಒಡಿ ತನಿಖೆಗೆ ಸರ್ಕಾರ ಆದೇಶ, ಶಾಸಕ ಸುನಿಲ್ ಸ್ವಾಗತ

ಪರಶುರಾಮ ಥೀಮ್ ಪಾರ್ಕ್‌ ಅವ್ಯವಹಾರ: ಸಿಒಡಿ ತನಿಖೆಗೆ ಸರ್ಕಾರ ಆದೇಶ, ಶಾಸಕ ಸುನಿಲ್ ಸ್ವಾಗತ

ಪರಶುರಾಮ ಥೀಮ್ ಪಾರ್ಕ್‌ ಅವ್ಯವಹಾರ: ಸಿಒಡಿ ತನಿಖೆಗೆ ಸರ್ಕಾರ ಆದೇಶ, ಶಾಸಕ ಸುನಿಲ್ ಸ್ವಾಗತ





ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್‌ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣವನ್ನು ಸಿಒಡಿ ಪೊಲೀಸರ ತನಿಖೆಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.



ಸಿದ್ದರಾಮಯ್ಯ ಸರ್ಕಾರದ ಈ ನಡೆಯನ್ನು ಸ್ಥಳೀಯ ಶಾಸಕ ಸುನಿಲ್ ಕುಮಾರ್‌ ಸ್ವಾಗತಿಸಿದ್ದಾರೆ.



ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಸುನಿಲ್ ಕುಮಾರ್, ಸಿಓಡಿ ತನಿಖೆಯನ್ನು ನಾನು ಸ್ವಾಗತಿಸುತ್ತೇನೆ. ಅನಗತ್ಯವಾಗಿ ಎಬ್ಬಿರುವ ಸುಳ್ಳು ಆರೋಪಗಳಿಗೆ ಒಂದು ಪೂರ್ಣ ವಿರಾಮ ಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.



ಪರಶುರಾಮನ ಕಂಚಿನ ಪ್ರತಿಮೆಯ ಬದಲಿಗೆ ಫೈಬರ್ ಮೂರ್ತಿ ಸ್ಥಾಪನೆಯಾಗಿರುವುದು ಪತ್ತೆಯಾಗಿತ್ತು. ಈ ವಿಷಯ ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿಗೂ ಕಾರಣವಾಗಿತ್ತು.



ಇದೀಗ ಮುಖ ಮುಚ್ಚಿಕೊಳ್ಳಲು ಶಾಸಕ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ಸ್ಥಳೀಯ ಜನರು ಆಡಿಕೊಳ್ಳುತ್ತಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99