-->

ಉಡುಪಿಗೆ ಹೆಚ್ಚುವರಿ ಎಸ್.ಪಿ. ಆಗಿ ಪರಮೇಶ್ವರ ಹೆಗಡೆ: ಕಿರು ಪರಿಚಯ

ಉಡುಪಿಗೆ ಹೆಚ್ಚುವರಿ ಎಸ್.ಪಿ. ಆಗಿ ಪರಮೇಶ್ವರ ಹೆಗಡೆ: ಕಿರು ಪರಿಚಯ

ಉಡುಪಿಗೆ ಹೆಚ್ಚುವರಿ ಎಸ್.ಪಿ. ಆಗಿ ಪರಮೇಶ್ವರ ಹೆಗಡೆ: ಕಿರು ಪರಿಚಯ





ಕರ್ನಾಟಕ ಸರಕಾರ ಎಲ್ಲ ಜಿಲ್ಲೆಗಳಿಗೂ ಎರಡನೇ ಹೆಚ್ಚುವರಿ  ಪೊಲೀಸ್ವರಿಷ್ಠಾಧಿಕಾರಿಗಳನ್ನು  ನೇಮಕ ಮಾಡಿದ್ದುಆ ಪ್ರಕಾರ ಹೊರಡಿಸಿದ ಆದೇಶದಂತೆ ಉಡುಪಿ ಜಿಲ್ಲೆಯ 2ನೇ ಹೆಚ್ಚುವರಿ  ಪೊಲೀಸ್‌  ವರಿಷ್ಠಾಧಿಕಾರಿಯಾಗಿ  ಪರಮೇಶ್ವರ  ಅನಂತ್‌  ಹೆಗಡೆ  ಅವರು ನೇಮಕಗೊಂಡಿದ್ದಾರೆ. 



ಪೊಲೀಸ್ ಇಲಾಖೆಯಲ್ಲಿ ಹಾಗೂ ಸಾಮಾಜಿಕವಾಗಿ ಪಿಹೆಗಡೆ ಎಂದೇ ಪ್ರಖ್ಯಾತರಾಗಿರುವ ಪರಮೇಶ್ವರ ಅನಂತ್‌ ಹೆಗಡೆ ಅವರು ಇದಕ್ಕೂ ಮೊದಲು ಮಂಗಳೂರು  ನಗರ  ಅಪರಾಧ  ವಿಭಾಗಸಿಸಿಬಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.


ಸಬ್ ಇನ್ಸ್ ಪೆಕ್ಟರ್ ಆಗಿ 1994ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು, 2004ರಿಂದ  2006ರವರೆಗೆ ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ, 2015ರಲ್ಲಿ ಸಿಸಿಬಿಯಲ್ಲಿ ಸೇವೆ ಸಲ್ಲಿಸಿದ್ದಾರೆ.


ಆ ಬಳಿಕ ಅವರು ವಿಜಯ ನಗರ ಉಪವಿಭಾಗದ ಡ್ಯೂಟಿ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಆಗಿ ಕರ್ತವ್ಯ ನಿರ್ವಹಿಸಿದ್ದರುಅವರ ಸೇವಾವಧಿಯಲ್ಲಿ ಪಿ.ಎ. ಹೆಗಡೆ ಅವರು ಬಂಟ್ವಾಳದಲ್ಲಿ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂಲ್ಕಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸೇವೆ ಸಲ್ಲಿಸಿದ್ದು, ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಣಿಕ ಖಡಕ್ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದಾರೆ.


ಮೊದಲನೇ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆಗಿರುವ ಎಸ್‌. ಟಿ.  ಸಿದ್ದಲಿಂಗಪ್ಪ  ಉಡುಪಿ  ಜಿಲ್ಲೆಯ  ಕಾನೂನು -  ಸುವ್ಯವಸ್ಥೆ  ಹಾಗೂ  ಸಂಚಾರ  ವಿಭಾಗವನ್ನು  ನೋಡಿಕೊಳ್ಳಲಿದ್ದಾರೆ


ಈಗ ನಿಯುಕ್ತಿಯಾಗಿರುವ ಪರಮೇಶ್ವರ ಅನಂತ್‌ ಹೆಗಡೆ ಅವರು ಅಪರಾಧ  ಹಾಗೂ  ಡಿಎಆರ್‌  ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99