-->

UDUPI : ಉಡುಪಿಯ ಕುರುಡುಂಜೆಯಲ್ಲಿ ಕೊರಗಜ್ಜನ ಪವಾಡ..!

UDUPI : ಉಡುಪಿಯ ಕುರುಡುಂಜೆಯಲ್ಲಿ ಕೊರಗಜ್ಜನ ಪವಾಡ..!

ಕರಾವಳಿಗರ ಆರಾಧ್ಯ ದೈವ ಕೊರಗಜ್ಜನ ಪವಾಡದ ಸುದ್ದಿ ಅನೇಕ ಸಲ ಕೇಳಿರಬಹುದು.ಇದೀಗ ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ಭಕ್ತರನ್ನು ಅಚ್ಚರಿ ಮೂಡಿಸಿದೆ. ಉಡುಪಿಯ ಬ್ರಹ್ಮಾವರ ಸಮೀಪದ ಕುರುಡುಂಜೆಯಲ್ಲಿ ಕೊರಗಜ್ಜ ಪವಾಡ ಬೆಳಕಿಗೆ ಬಂದಿದ್ದು,
ಪವಾಡದಿಂದ  ಕಳೆದುಹೋದ ಕೆಲವೇ ಹೊತ್ತಿನಲ್ಲಿ ಹಣ ಮರಳಿ ದೊರೆತ ಘಟನೆ ನಡೆದಿದೆ ಕುರುಡುಂಜೆಯ ಗದ್ದೆಯಲ್ಲಿ ಉಳುಮೆ ಮಾಡಲು ಬಂದಿದ್ದ ಶಿವಮೊಗ್ಗದ ಗಣೇಶ್ ಎಂಬುವವರು ಬಂದಿದ್ದರು. ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಂಪಾದಿಸಿದ ಹಣ ಪ್ಲಾಸ್ಟಿಕ್ ತೊಟ್ಟೆಯಲ್ಲಿತ್ತು.
ಟ್ರ್ಯಾಕ್ಟರ್ ನಲ್ಲೆ ಹಣದ ಕಟ್ಟು ಇಟ್ಟುಕೊಂಡು ಉಳುಮೆ ಮಾಡುತ್ತಿದ್ದರು. ಕೆಲಸ ಮುಗಿಸಿದ ನಂತರ ನೋಡುವಾಗ ಹಣ ಕಳೆದು ಹೋಗಿತ್ತು. ಗದ್ದೆಯಲ್ಲಿ ಎಷ್ಟೇ ಹುಡುಕಿದರೂ ಹಣ ಸಿಗಲಿಲ್ಲ. ಸ್ಥಳೀಯ ಮಹೇಶ್ ಶೆಟ್ಟಿ ಅವರ ಸಲಹೆ ಮೇರೆಗೆ ಗಣೇಶ್ , ಹಣ ಮರಳಿ ದೊರೆತರೆ, ಕಳ್ಳು, ಬೀಡ , ಚಕ್ಕುಲಿಯೊಂದಿಗೆ ದೊರಕಿದ ಹಣದಲ್ಲಿ ಒಂದು ಸಾವಿರ ಕಾಣಿಕೆ ಹಾಕುವುದಾಗಿ ಕೊರಗಜ್ಜನಿಗೆ ಹರಕೆ ಹೊರುತ್ತಾರೆ.
ಬಳಿಕ ಗದ್ದೆಯಲ್ಲಿ ಹುಡುಕಿದಾಗ ಕಳೆದು ಹೋಗಿದ್ದ 25,000 ಹಣದ ಕಟ್ಟು ಹುಡುಕಿದ ಸ್ಥಳದಲ್ಲಿ ಮತ್ತೆ ಪತ್ತೆಯಾಗಿದೆ.ಇದು ಕೊರಗಜ್ಜನ ಪವಾಡ ಎನ್ನುತ್ತಿದ್ದಾರೆ ಸ್ಥಳೀಯರು..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99