-->
ಇನಾಯತ್ ಅಲಿಗೆ ಬೆಂಬಲ ಘೋಷಿಸಿದ ಮೊಯ್ದೀನ್ ಬಾವಾ ಆಪ್ತ

ಇನಾಯತ್ ಅಲಿಗೆ ಬೆಂಬಲ ಘೋಷಿಸಿದ ಮೊಯ್ದೀನ್ ಬಾವಾ ಆಪ್ತ



ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು, ಇನಾಯತ್ ಅಲಿಯ ಜನಪ್ರಿಯತೆಗೆ ಹೆಚ್ಚಿನ ಬೆಂಬಲ ದೊರಕುತ್ತಿದೆ. ಇದೀಗ ಬಾವಾ ಪಾಳಯದಲ್ಲಿ ಗುರುತಿಸಿಕೊಂಡಿದ್ದ, ಅವರ ಅತ್ಯಾಪ್ತ, ಅವರ ಚಾಲಕರಾಗಿದ್ದ ನಿಝಾಮ್ ಗುರುಪುರ ಮತ್ತೆ ಇನಾಯತ್ ಅಲಿಗೆ ಬೆಂಬಲ ಘೋಷಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಜಿಲ್ಲೆಯಲ್ಲಿ ಬೆಂಬಲವಿಲ್ಲ. ಹೀಗಾಗಿ ಜೆಡಿಎಸ್‌ನ್ನು ಬೆಂಬಲಿಸಿದರೆ ಅದು ಬಿಜೆಪಿಗೆ ಸುಲಭದ ದಾರಿ ಮಾಡಿ ಕೊಟ್ಟಂತೆ. ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ಮಿತ್ರರು ಮೊಯ್ದೀನ್ ಬಾವಾ ಗೆ ನೀಡಿದ ಬೆಂಬಲ ವಾಪಸ್ ಪಡೆದು ಇನಾಯತ್ ಅಲಿ ಯನ್ನು ಬೆಂಬಲಿಸುತ್ತಿದ್ದೇವೆ ಎಂದರು.
ಒಟ್ಟಿನಲ್ಲಿ ಜಾತ್ಯಾತೀತ ಶಕ್ತಿಯು ಗೆಲ್ಲಬೇಕಿದ್ದು, ಕೋಮುವಾದ ಸೋಲಬೇಕಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article