![ಮಂಗಳೂರು: ಕೆಲಸಕ್ಕೆ ತೆರಳಿದ 19 ವರ್ಷದ ಯುವತಿ ನಾಪತ್ತೆ- ಪ್ರಿಯಕರನ ಜೊತೆಗೆ ಹೋಗಿರುವ ಶಂಕೆ ಮಂಗಳೂರು: ಕೆಲಸಕ್ಕೆ ತೆರಳಿದ 19 ವರ್ಷದ ಯುವತಿ ನಾಪತ್ತೆ- ಪ್ರಿಯಕರನ ಜೊತೆಗೆ ಹೋಗಿರುವ ಶಂಕೆ](https://lh3.googleusercontent.com/-_NtNPs3ucAU/Y95Ok4cJdmI/AAAAAAAAWb4/frHje2XttBIDmXXiEiu5EwcVT4V1KCR7ACNcBGAsYHQ/s1600/1675513465702761-0.png)
ಮಂಗಳೂರು: ಕೆಲಸಕ್ಕೆ ತೆರಳಿದ 19 ವರ್ಷದ ಯುವತಿ ನಾಪತ್ತೆ- ಪ್ರಿಯಕರನ ಜೊತೆಗೆ ಹೋಗಿರುವ ಶಂಕೆ
Saturday, February 4, 2023
ಮಂಗಳೂರು : ಕೆಲಸಕ್ಕೆಂದು ತೆರಳಿದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಡಂಬೈಲ್ ಗ್ರಾಮದ ಜಯಶ್ರೀ ಶೆಟ್ಟಿ ಎಂಬವರ ಮಗಳು ಕಾವೇರಿ(19) ಕಾಣೆಯಾದ ಯುವತಿ.
ಕಾವೇರಿ ಜ.27ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ಮರಳಿ ಬಾರದೇ ಕಾಣೆಯಾಗಿದ್ದಾರೆ. ತಡಂಬೈಲ್ ನಿವಾಸಿ ಮಾಂತೇಶ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಜಯಶ್ರೀ ಶೆಟ್ಟಿ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾವೇರಿ 163 ಸೆ.ಮೀ. ಉದ್ದ, ಎಣ್ಣೆ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಕಪ್ಪು ಚುಕ್ಕೆಗಳಿಂದ ಕೂಡಿದ ಚೂಡಿದಾರ ಧರಿಸಿದ್ದರು. ಇವರು ಹಿಂದಿ, ಕನ್ನಡ ಮತ್ತು ತುಳು ಭಾಷೆಯನ್ನು ಬಲ್ಲವರಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.