![UDUPI ; ಬೈಕ್ ಢಿಕ್ಕಿ ಪಾದಚಾರಿ ಸಾವು UDUPI ; ಬೈಕ್ ಢಿಕ್ಕಿ ಪಾದಚಾರಿ ಸಾವು](https://blogger.googleusercontent.com/img/b/R29vZ2xl/AVvXsEiFbjsyphvSq2AFa4BgIZGE-XOaau1AGXosMBXBJgnIO1DUrGgUww1tOJtSDP4zYNhP_DC8X6Xt6l8rsHP3T70uCPwnvzAbbdxflUc4PDtUH9dRPBsMBAEAgP-mbsNiOlF2T19TiTYHcpE/s1600/1664288430567190-0.png)
UDUPI ; ಬೈಕ್ ಢಿಕ್ಕಿ ಪಾದಚಾರಿ ಸಾವು
Tuesday, September 27, 2022
ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೊಪ್ಪಲಂಗಡಿ ನಿವಾಸಿ ಕಿಶೋರ್ ಶೆಟ್ಟಿ ಮೃತಪಟ್ಟವರು.
ಉಡುಪಿಯಿಂದ ಪಡುಬಿದ್ರಿ ಕಡೆ ತೆರಳುತ್ತಿದ್ದ ಬೈಕ್ ರಸ್ತೆ ಬದಿ ನಿಂತಿದ್ದ ಕಿಶೋರ್ ಶೆಟ್ಟಿಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಕಿಶೋರ್ ಸಾವನ್ಪಿದ ಘಟನೆ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.