![UDUPI : ಮೂವರು ಅಂತರ್ರಾಜ್ಯ ಕಳ್ಳರು ಅಂದರ್ UDUPI : ಮೂವರು ಅಂತರ್ರಾಜ್ಯ ಕಳ್ಳರು ಅಂದರ್](https://lh3.googleusercontent.com/-tgcBEjEmtM0/Yuu04lRLdCI/AAAAAAAADJw/eVqW0OVhpGs_CDWmjbK1iMaU1HdkzKpygCNcBGAsYHQ/s1600/1659614430047460-0.png)
UDUPI : ಮೂವರು ಅಂತರ್ರಾಜ್ಯ ಕಳ್ಳರು ಅಂದರ್
Thursday, August 4, 2022
ಮೂವರು ಅಂತರ್ರಾಜ್ಯ ಕಳ್ಳರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರದ ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಮೂವರು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಕಾರ್ಯಚರಣೆ ನಡೆಸಿ, ದಿಲೀಪ್ ಶೆಟ್ಟಿ, ರಾಜನ್ ಮತ್ತು ಷಣ್ಮುಗಂ ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳ ಸ್ಯಾಂಟ್ರೋ ಕಾರಿನಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ. ಆರೋಪಿಗಳಿಂದ ಚಿನ್ನಾಭರಣ, ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಕಾರು, ಒಂದು ಓಮ್ಮಿ ಕಾರು ಸಹಿತ ಸುಮಾರು 20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು, ಹಾಸನ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ.