Header Ad

UDUPI : ಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು

ಮರದಿಂದ ಬಿದ್ದು ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಸೀತಾನದಿ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ  ನಡೆದಿದೆ. ಸೀತಾನದಿ ನಂದ್ಲು ನಿವಾಸಿ ರಾಜಗೋಪಾಲ್ ಶೆಟ್ಟಿ( 68) ಎಂಬವರು ಮೃತಪಟ್ಟವರು.
ಮನೆಯ ಸಮೀಪದ ಮರದ ಗೆಲ್ಲು ಕಡಿಯಲೆಂದು ಮರಹತ್ತಿದ್ದ ರಾಜಗೋಪಾಲ್ಅ ವರು, ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸೀತಾನದಿ ಪ್ರೈಮರಿ ಶಾಲೆಯಲ್ಲಿ 25 ವರ್ಷ ಶಿಕ್ಷಕರಾಗಿ ಹಾಗೂ ಹೆಬ್ರಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮನೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ


ಇತ್ತೀಚಿನ ಸುದ್ದಿಗಳು