![UDUPI : ಬಸ್ ನಿಲ್ದಾಣದಲ್ಲಿ ಮಹಿಳೆ ಹೃದಯಾಘಾತದಿಂದ ಸಾವು UDUPI : ಬಸ್ ನಿಲ್ದಾಣದಲ್ಲಿ ಮಹಿಳೆ ಹೃದಯಾಘಾತದಿಂದ ಸಾವು](https://lh3.googleusercontent.com/-D4RV60vORTU/Yr8N28etJMI/AAAAAAAACYg/vWOdiVTIVn0zAqD8ZOR3JFmqJF__05-gACNcBGAsYHQ/s1600/1656688088718898-0.png)
UDUPI : ಬಸ್ ನಿಲ್ದಾಣದಲ್ಲಿ ಮಹಿಳೆ ಹೃದಯಾಘಾತದಿಂದ ಸಾವು
Friday, July 1, 2022
ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಬ್ಯಾಂಕ್ ಉದ್ಯೋಗಿ ಮಹಿಳೆಯೊಬ್ಬರು ಹೃದಯಾಘಾತದಿಂದ ಕುಸಿದು ಸಾವನ್ಪಿದ ಘಟನೆ ಉಡುಪಿಯ ಉದ್ಯಾವರದ ಗುಡ್ಡೆಯಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಉದ್ಯಾವರದ ವಸಂತಿ ಸಾವನ್ಪಿದ ಮಹಿಳೆ. ಕಂಟ್ಟಿಂಗೇರಿಯಲ್ಲಿರುವ ಖಾಸಗಿ ಬ್ಯಾಂಕ್ ಉದ್ಯೋಗವಾಗಿಯಾಗಿರುವ, ವಸಂತಿ ಬೆಳಗ್ಗೆ ಕಚೇರಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದರು.
ವೇಳೆ ಕುಸಿದು ಬಿದ್ದಿದ್ದು ಇದನ್ನು ಗಮನಿಸಿದ ರಿಕ್ಷಾ ಚಾಲಕರು ಮಹಿಳೆಯನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುದಾಗಿ ದೃಡ ಪಡಿಸಿದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.