![UDUPI : ಸಮುದ್ರಕ್ಕೆ ಉರುಳಿದ ಕಾರು : ಒರ್ವ ಸಾವು, ಇನೋರ್ವ ನಾಪತ್ತೆ UDUPI : ಸಮುದ್ರಕ್ಕೆ ಉರುಳಿದ ಕಾರು : ಒರ್ವ ಸಾವು, ಇನೋರ್ವ ನಾಪತ್ತೆ](https://lh3.googleusercontent.com/-Kv5I_QxiWqc/YsFX1TObTGI/AAAAAAAACbI/5hEmTtdYuRU2XBuuS_lQulHD3U5Yx5ZSgCNcBGAsYHQ/s1600/1656838098665058-0.png)
UDUPI : ಸಮುದ್ರಕ್ಕೆ ಉರುಳಿದ ಕಾರು : ಒರ್ವ ಸಾವು, ಇನೋರ್ವ ನಾಪತ್ತೆ
Sunday, July 3, 2022
ಹೆದ್ದಾರಿಯಿಂದ ಸಮುದ್ರಕ್ಕೆ ಕಾರೊಂದು ಬಿದ್ದು ಓರ್ವ ಸಾವನ್ನಪ್ಪಿದ್ದು, ಒರ್ವ ನಾಪತ್ತೆಯಾಗಿ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಮರವಂತೆಯಲ್ಲಿ ನಡೆದಿದೆ. ವಿರಾಜ್ ಆಚಾರ್ಯ ಆಚಾರ್ಯ ಮೃತಪಟ್ಟವರು. ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಕಾರು ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಸಮುದ್ರಕ್ಕೆ ಬಿದ್ದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಓರ್ವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಗ್ನಿಶಾಮಕ ಸಿಬಂದಿ ಸ್ಥಳಕ್ಕಾಗಮಿಸಿ ಕಾರನ್ನು ಮೇಲಕ್ಕೆತ್ತಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.