-->
UDUPI :  ಲಾರಿ ಢಿಕ್ಕಿ :  ರಸ್ತೆ ಬಳಿ ನಿಂತಿದ್ದ ಪಾದಚಾರಿ ಸಾವು

UDUPI : ಲಾರಿ ಢಿಕ್ಕಿ : ರಸ್ತೆ ಬಳಿ ನಿಂತಿದ್ದ ಪಾದಚಾರಿ ಸಾವು

ರಸ್ತೆ ಬಳಿ ನಿಂತಿದ್ದ ಪಾದಚಾರಿ ಮೇಲೆ ಲಾರಿ ಹರಿದು ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ - ಪಡುಬಿದ್ರಿ ಜಂಕ್ಷನ್‌ನಲ್ಲಿ ನಡೆದಿದೆ. ಸಾಂತೂರು ಗ್ರಾಮದ ನಿವಾಸಿ ಜಯರಾಮ ಆಚಾರ್ಯ (51) ಮೃತಪಟ್ಟವರು. ಪಡುಬಿದ್ರಿಯ ಕಾರ್ಕಳ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ-66 ರ ಬದಿಯಲ್ಲಿ ರಸ್ತೆ ದಾಟಲು, ಜಯರಾಮ ಆಚಾರ್ಯ ನಿಂತಿದ್ದಾಗ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಗಲೇ ಅವರು‌ ಮೃತಪಟ್ಟಿದ್ದಾಗಿ ವೈಧ್ಯರು ಖಚಿತಪಡಿಸಿದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article