-->

UDUPI : ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು; ಕೆಲಸದಾಕೆ ಮೇಲೆ ಶಂಕೆ

UDUPI : ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು; ಕೆಲಸದಾಕೆ ಮೇಲೆ ಶಂಕೆ

ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ನರಸಿಂಹ ಗಾಣಿಗ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಮನೆ ಕೆಲಸದಾಕೆ ಕಳವು ಮಾಡಿರಬಹುದು ಅಂತ ಶಂಕಿಸಿ ದೂರು ದಾಖಲಿಸಿದ್ದಾರೆ. ಉಡುಪಿಯ ಕೊರಂಗ್ರಪಾಡಿ ನಿವಾಸಿ ಮಂಜುಳಾ,  ನರಸಿಂಹ ಗಾಣಿಗ ಅವರ ಮನೆಯಲ್ಲಿ ಕೆಲಸಕ್ಕಿದ್ದಳು. ಮೇ 25ರಂದು ತನ್ನ ಮನೆಗೆ ಹೋಗಿ ಬರುದಾಗಿ , ಹೋದವಳು ವಾಪಾಸು ಬರಲಿಲ್ಲ, ಮೇ 27 ರಂದು ಕಪಾಟು ತೆರೆದು ನೋಡಿದಾಗ  28 ಗ್ರಾಂ ತೂಕದ 2 ಚಿನ್ನದ ಬಳೆ ನಾಪತ್ತೆ ಆಗಿರುವುದು ಕಂಡು ಬಂದಿದೆ. ಕೆಲಸದಾಕೆ ಮಂಜುಳಾಳನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಹೀಗಾಗಿ ಮಂಜುಳಾ ಕಳವು ಮಾಡಿರಬಹುದು ಅಂತ ಶಂಕಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99