
UDUPI : ಬ್ರಹ್ಮಕಲಶೋತ್ಸವದ ಪ್ರಚಾರಕ್ಕೆ ಬಳಸಿದ ಛತ್ರಿಗಳನ್ನು ಬಡವರಿಗೆ ವಿತರಿಸಿದ ಸಂಸದೆ ಶೋಭಾ
ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದೆ. ದೇಗುಲದ ಬ್ರಹ್ಮಕಲಶದ ಪ್ರಚಾರಕ್ಕಾಗಿ ನಗರದಲ್ಲಿ ಸಾವಿರಾರು ಛತ್ರಿಗಳನ್ನು, ರಸ್ತೆ ಬದಿಯ ಕಂಬಗಳಿಗೆ ಕಟ್ಟಿ, ಈ ಮೂಲಕ
ಬ್ರಹ್ಮಕಲಶೋತ್ಸವದ ಪ್ರಚಾರ ಮಾಡಲಾಗಿತ್ತು. ಪ್ರಚಾರಕ್ಕಾಗಿ ಬಳಸಿದ ಛತ್ರಗಳನ್ನು ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಬಳಿಕ ಸಾರ್ವಜನಿಕರು ತೆಗೆದುಕೊಂಡು ಹೋಗಬಹುದು ಅಂತ ಮೊದಲೇ ತಿಳಿಸಲಾಗಿತ್ತು, ಆದರೂ 200 ಛತ್ರಿಗಳು ಉಳಿದಿತ್ತು. ಸದ್ಯ ಉಳಿದ ಛತ್ರಿಗಳನ್ನು ದೇವಸ್ಥಾನಕ್ಕೆ ತಂದು, ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಬಡವರಿಗೆ ಹಸ್ತಾಂತರ ಮಾಡಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ದೇವಸ್ಥಾನದ ವಿಶಿಷ್ಟ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.