UDUPI- ತಾಳಿ ಕಟ್ಟುವ ಶುಭವೇಳೆ 'ನೀನು ಬೇಡ' ಎಂದ ವಧು!


ತಾಳಿ ಕುಟ್ಟು ಶುಭ ಗಳಿಗೆಯಲ್ಲಿ ವದು, ತನಗೆ ವರ ಇಷ್ಟ ಇಲ್ಲ ಅಂತ ಹೇಳಿದ ಕಾರಣ ಮದುವೊಂದು ಮರಿದು ಬಿದ್ದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. 

ವರ ವಿದೇಶದಲ್ಲಿ, ವದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. 4 ತಿಂಗಳ ಹಿಂದೆ ಎರಡು ಮನೆಯವರು ಸೇರಿ ಮದುವೆ ನಿಶ್ಚಿತಾರ್ಥ ನಡೆಸಿದ್ದರು. ನಂತರ ಇಬ್ಬರೂ ಪೋನ್ ಸಂಪರ್ಕದಲ್ಲಿ ಅನ್ಯೋನ್ಯವಾಗಿಯೇ ಇದ್ದರು ಎನ್ನಲಾಗಿದೆ. 

ಮದುವೆ ದಿನ ಎಲ್ಲ ಕಾರ್ಯಕ್ರಮಗಳು ಮುಗಿದು ತಾಳಿ ಕಟ್ಟುವ ಗಳಿಗೆ  ಬಂದಾಗ ವದು ವರನನ್ನು ಕೊಠಡಿಗೆ ಕರೆದುಕೊಂಡು ಹೋಗಿ, ನನಗೆ ನಿನ್ನನ್ನು ಮದುವೆ ಆಗಲು ಇಷ್ಟವಿಲ್ಲ. ಬೇರೆ ಪ್ರಪೋಸಲ್ ಇಷ್ಟ ಪಟ್ಟಿರುದಾಗಿ ತಿಳಿಸಿದ್ದಾಳೆ. 

ಕೊನೆಗೆ ವಾಗ್ವಾದವಾಗಿ ಮದುವೆ ಮುರಿದು ಬಿದ್ದು,  ಬ್ರಹ್ಮಾವರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡು ಕಡೆಯವರು ಮದುವೆ ಖರ್ಚಿನ ಸಮಪಾಲು ಹಾಕಲು ಒಪ್ಪುದರೊಂದಿಗೆ ಪ್ರಕರಣ ಮುಕ್ತಾಯಗೊಂಡಿತು..