-->

ಉಡುಪಿ;ಕಾರು ಡಿವೈಡರ್‌ಗೆ ಢಿಕ್ಕಿ,  ಯುವಕ ಸ್ಥಳದಲ್ಲೇ ಸಾವು

ಉಡುಪಿ;ಕಾರು ಡಿವೈಡರ್‌ಗೆ ಢಿಕ್ಕಿ, ಯುವಕ ಸ್ಥಳದಲ್ಲೇ ಸಾವು


ಕಾರು ಡಿವೈಡರ್‌ಗೆ ಢಿಕ್ಕಿ, ಒರ್ವ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರುಮಂಜೇಶ್ವರದಲ್ಲಿ ನಡೆದಿದೆ.

 ಬೆಂಗಳೂರು ಮೂಲದ ಅಕ್ಷಯ್ ಸಾವನ್ನಪ್ಪಿದ ಯುವಕ. ಕಾರಿನಲ್ಲಿದ್ದ ತೇಜಸ್, ಪವನ್, ಹರ್ಷ  ಗಂಭೀರ ಗಾಯಗೊಂಡು  ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.




 ಬೆಂಗಳೂರು ಮೂಲದ ಯುವಕರು ಕರಾವಳಿ ಪ್ರವಾಸಕ್ಕೆ ಅಂತ ಬಂದು ಉತ್ತರ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ತಮ್ಮ ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಉಡುಪಿಯ ಕಿರಿ ಮಂಜೇಶ್ಚರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಅಕ್ಷಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99