![ಮಂಗಳೂರಿನ police ಹೆಡ್ ಕಾನ್ಸ್ ಟೇಬಲ್ ಗೆ ಶಿವಮೊಗ್ಗದಲ್ಲಿ ಹೃದಯಾಘಾತ ಮಂಗಳೂರಿನ police ಹೆಡ್ ಕಾನ್ಸ್ ಟೇಬಲ್ ಗೆ ಶಿವಮೊಗ್ಗದಲ್ಲಿ ಹೃದಯಾಘಾತ](https://lh3.googleusercontent.com/-yplOL5Afw68/YdVQmVFV5yI/AAAAAAAAUG4/Nk398pKJr7gwbANyHFw2VmftUZudXH5vgCNcBGAsYHQ/s1600/1641369750832780-0.png)
ಮಂಗಳೂರಿನ police ಹೆಡ್ ಕಾನ್ಸ್ ಟೇಬಲ್ ಗೆ ಶಿವಮೊಗ್ಗದಲ್ಲಿ ಹೃದಯಾಘಾತ
Wednesday, January 5, 2022
ಮಂಗಳೂರು; ಮೂಡಬಿದಿರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ವೊಬ್ಬರು ಶಿವಮೊಗ್ಗದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಂತೋಷ್ (36) ಮೃತಪಟ್ಟವರು. ಸಂತೋಷ್ ಅವರು ಕಳೆದ 12 ವರ್ಷಗಳಿಂದ ಮಂಗಳೂರಿನಲ್ಲಿ ಪೊಲೀಸ್ ಸಿಬ್ನಂದಿಯಾಗಿ ಕೆಲಸ ನಿರ್ವಹಿಸಿದ್ದರು.
ನಿನ್ನೆ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಹೋಗಿದ್ದು ಈ ವೇಳೆ ಅವರಿಗೆ ಹೃದಯಾಘಾತವಾಗಿದೆ.
ಸಂತೋಷ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವರಾಗಿದ್ದಾರೆ. ಇವರ ನಿಧನಕ್ಕೆ ಪೊಲೀಸ್ ಸಿಬ್ಬಂದಿ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.