-->

ರೇಷ್ಮೆ ಸೀರೆಯುಟ್ಟು ಮಧ್ಯರಾತ್ರಿ ಊಟ ಬಡಿಸಿದ ಮಹಿಳೆ ..!ಏನಿದು ಪ್ರಸಂಗ...?

ರೇಷ್ಮೆ ಸೀರೆಯುಟ್ಟು ಮಧ್ಯರಾತ್ರಿ ಊಟ ಬಡಿಸಿದ ಮಹಿಳೆ ..!ಏನಿದು ಪ್ರಸಂಗ...?

ಕೊಲ್ಕತಾ: ವ್ಯರ್ಥವಾಗುತ್ತಿದ್ದ ಮದುವೆಯ ಊಟವನ್ನು ಮಹಿಳೆಯೊಬ್ಬರು, ಮಧ್ಯರಾತ್ರಿ ತೆಗೆದುಕೊಂಡು ಹೋಗಿ ರೈಲ್ವೇ ಪ್ಲಾಟ್ಫಾರಂನಲ್ಲಿ ಬಡವರಿಗೆ ಹಂಚಿರುವ ಪ್ರಸಂಗ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.ವೆಡ್ಡಿಂಗ್ ಫೋಟೋಗ್ರಾಫರ್​ ನೀಲಾಂಜನ್​ ಮೊಂಡಲ್​ ಈ ಮಹಿಳೆಯ ಚಿತ್ರವನ್ನು ತಮ್ಮ ಫೇಸ್​ಬುಕ್​ ಪೇಜಿನಲ್ಲಿ ಪೋಸ್ಟ್​ ಮಾಡಿದ್ದಾರೆ. 

ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟ ಮಹಿಳೆಯೊಬ್ಬರು ಕೊಲ್ಕತಾ ಸಬ್​ಅರ್ಬನ್​ ರೈಲ್ವೇ ಸ್ಟೇಷನ್​ನ ರಾಣಾಘಟ್​ ಜಂಕ್ಷನ್​ನಲ್ಲಿ ಡಿ.4 ರ ಮಧ್ಯರಾತ್ರಿ 1 ಗಂಟೆಗೆ ಪಾಪಿಯ ಕರ್​ ಎಂಬ ಮಹಿಳೆ ಹಸಿದವರ ಹೊಟ್ಟೆ ತಣ್ಣಗಾಗಿಸಿದ್ದಾರೆ. ತಮ್ಮ ಸೋದರನ ಮದುವೆಯ ಸಮಾರಂಭದಲ್ಲಿ ಅತಿಥಿಗಳ ಊಟವೆಲ್ಲಾ ಮುಗಿದ ನಂತರ ಉಳಿದಿದ್ದ ಭಾರೀ ಪ್ರಮಾಣದ ಊಟವನ್ನು ಪೇಪರ್​ ಪ್ಲೇಟ್​ಗಳ ಮೇಲೆ ಖುದ್ದು ಬಡಿಸಿಕೊಟ್ಟಿದ್ದಾರೆ. ಈ ಮಾನವೀಯ ಕೆಲಸದ ಬಗ್ಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. 


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99