-->

ಪುನೀತ್ ಸಾವಿನಲ್ಲೂ ಲಾಭ ಪಡೆಯಲು ಹುನ್ನಾರ: ಈ ಜಾಹೀರಾತು ನೋಡಿದ್ರೆ ನಿಮಗೂ ಆಘಾತವಾಗಬಹುದು

ಪುನೀತ್ ಸಾವಿನಲ್ಲೂ ಲಾಭ ಪಡೆಯಲು ಹುನ್ನಾರ: ಈ ಜಾಹೀರಾತು ನೋಡಿದ್ರೆ ನಿಮಗೂ ಆಘಾತವಾಗಬಹುದು

ಬೆಂಗಳೂರು: ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಯುವಕರಲ್ಲಿ ತಳಮಳ ಶುರುವಾಗಿದೆ. ಅತಿಯಾದ ವರ್ಕೌಟ್, ಜಿಮ್ ಮತ್ತಿತರ ವ್ಯಾಯಾಮಗಳಿಗೆ ತೆರಳುವವರು ಈಗ ಎರಡೆರಡು ಬಾರಿ ಯೋಚಿಸುವಂತಾಗಿದೆ.
ಆದರೆ ಬೆಂಗಳೂರಿನ ಡಯಾಗ್ನಾಸ್ಟಿಕ್ ಕೇಂದ್ರವೊಂದು ಪುನೀತ್ ನಿಧನಕ್ಕೆ ಸಂತಾಪ ಕೋರಿ ಹಾಕಿರುವ ಬ್ಯಾನರ್, ಅವರ ಸಂಸ್ಥೆಯನ್ನು ಪ್ರಮೋಟ್ ಮಾಡಲು ಬಯಸಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ರೆಡೆಂಟ್ ಡಯಾಗ್ನಾಸ್ಟಿಕ್ ಸೆಂಟರ್ ಪುನೀತ್ ನಿಧನಕ್ಕೆ ಸಂತಾಪ ಕೋರಿ ಬ್ಯಾನರ್ ಹಾಕಿದ್ದು, ಅದರ ಕೆಳಭಾಗದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ತಮ್ಮ ಸಂಸ್ಥೆಯ ಸೇವೆ ಮತ್ತು ಆಫರ್ ಬಗ್ಗೆ ಪ್ರದರ್ಶಿಸಿದ್ದು, ಕೆಂಗಣ್ಣಿಗೆ ಗುರಿಯಾಗಿದೆ.

ಇತರರ ಸಾವಿನಲ್ಲೂ ತಮ್ಮ ಬೇಳೆ ಬೇಯಿಸಲು ಹೊರಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರೋಪಗಳಿಗೆ ಕಾರಣವಾಗಿದೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99