-->

ಆಸ್ಪತ್ರೆಗೆ ದಾಖಲಾಗಿದ್ದು ಕಿಡ್ನಿ ಕಲ್ಲು ತೆಗೆಯಲು; ಕಲ್ಲು ಬಿಟ್ಟು ಕಿಡ್ನಿಯನ್ನೇ ತೆಗೆದ ವೈದ್ಯರು!

ಆಸ್ಪತ್ರೆಗೆ ದಾಖಲಾಗಿದ್ದು ಕಿಡ್ನಿ ಕಲ್ಲು ತೆಗೆಯಲು; ಕಲ್ಲು ಬಿಟ್ಟು ಕಿಡ್ನಿಯನ್ನೇ ತೆಗೆದ ವೈದ್ಯರು!

ಅಹ್ಮದಾಬಾದ್: ಕಿಡ್ನಿಯಲ್ಲಿನ ಕಲ್ಲು ತೆಗೆಯಲೆಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಕಿಡ್ನಿಯನ್ನೇ ಆಪರೇಷನ್ ಮಾಡಿ ತೆಗೆದ ನಿರ್ಲಕ್ಷ್ಯ ದ ಘಟನೆ ಮಹಿಸಾಗರ್ ಜಿಲ್ಲೆಯ ಬಾಲಸಿನೋರ್‌ನಲ್ಲಿರುವ ಕೆಎಂಜಿ ಜನರಲ್​ ಆಸ್ಪತ್ರೆಯಲ್ಲಿ ನಡೆದಿದೆ.
ಬಳಿಕ ರೋಗಿ ಮೃತಪಟ್ಟಿದ್ದು, ರೋಗಿಯ ಸಂಬಂಧಿಕರು ಈ ಹಿನ್ನೆಲೆಯಲ್ಲಿ ಗ್ರಾಹಕ‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮೃತರ ಕುಟುಂಬಸ್ಥರ ವಾದ ಆಲಿಸಿದ ಅಹಮದಾಬಾದ್‌ನ ಗ್ರಾಹಕ ನ್ಯಾಯಾಲಯವು ಆಸ್ಪತ್ರೆಗೆ 11.23 ಲಕ್ಷ ರೂ.ಗಳನ್ನು ಮೃತ ರೋಗಿಯ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.

ಕೆಎಂಜಿ ಜನರಲ್​ ಆಸ್ಪತ್ರೆಯಲ್ಲಿ ಈ ರೋಗಿ ಕಿಡ್ನಿ ಸ್ಟೋನ್‌‌ಗೆ ಕಳೆದ ನಾಲ್ಕು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ವ್ಯಕ್ತಿಯ ಕಿಡ್ನಿಯಲ್ಲಿನ ಸ್ಟೋನ್​‌ನ ತೆಗೆಯಲು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಆದ್ರೆ ಶಸ್ತ್ರ ಚಿಕಿತ್ಸೆ ವೇಳೆ ಕಿಡ್ನಿಯಲ್ಲಿನ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ. ಇದರಿಂದ ರೋಗಿ ಮೃತಪಟ್ಟಿದ್ದಾನೆ.

ವೈದ್ಯರ ಈ ಅಚಾತುರ್ಯದ ಬಳಿಕ ರೋಗಿಯ ಪ್ರಾಣವನ್ನು ಉಳಿಸಲು ಮೂತ್ರಪಿಂಡ ತೆಗೆಯುವುದು ಅನಿವಾರ್ಯವಾಗಿತ್ತು ಎಂದು ಸಮಜಾಯಿಷಿ ನೀಡಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99