-->

ತಾಲಿಬಾನ್​ ಮತ್ತು ಅಫ್ಘಾನ್ ನಡುವೆ ಸಂಘರ್ಷ: ಬೀದಿಯಲ್ಲಿ ಮೃತದೇಹ, ಹೆಣ್ಣುಮಕ್ಕಳ ಅಪಹರಣ

ತಾಲಿಬಾನ್​ ಮತ್ತು ಅಫ್ಘಾನ್ ನಡುವೆ ಸಂಘರ್ಷ: ಬೀದಿಯಲ್ಲಿ ಮೃತದೇಹ, ಹೆಣ್ಣುಮಕ್ಕಳ ಅಪಹರಣ

ಕಾಬೂಲ್​: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಮತ್ತು ಅಫ್ಘಾನ್ ಸರಕಾರ ಹಾಗೂ​ ಸೇನಾಪಡೆಗಳ ನಡುವೆ ಸಂಘರ್ಷ ಮುಂದುವರಿದಿದ್ದು, ಈಗಾಗಲೇ ತಾಲಿಬಾನ್​, ಆಫ್ಘಾನ್​ನ ಅನೇಕ ಪ್ರದೇಶಗಳನ್ನು ಆಕ್ರಮಿಸಲಾಗಿದೆ‌. ತಾಲಿಬಾನಿಗಳ ಅಟ್ಟಹಾಸದ ಕತೆಯನ್ನು ಅಫ್ಘಾನ್ನರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಾಲಿಬಾನ್​ ಆಕ್ರಮಿಸಿರುವ ಉತ್ತರ ಅಫ್ಘಾನ್​ ನನ್ನು ತೊರೆದು ಸಾವಿರಾರು ಆಫ್ಘನ್ನರು ಫಲಾಯನ ಮಾಡಿದ್ದಾರೆ. ಹೀಗೆ ಓಡಿಹೋದ ಅಫ್ಘಾನ್ನರು ತಾಲಿಬಾನಿಗಳ ಕ್ರೂರ ವರ್ತನೆಯ ಬಗ್ಗೆ ಹೇಳುತ್ತಿದ್ದಾರೆ.  ರಸ್ತೆಯಲ್ಲಿ  ಮೃತದೇಹಗಳು‌ ಕಾಣಸಿಗುತ್ತಿವೆ. ಅಲ್ಲದೆ ತಮ್ಮ ಕಾಮತೃಷೆಗೆ ಹುಡುಗಿಯರನ್ನು ತಾಲಿಬಾನಿಗಳು ಅಪಹರಿಸುತ್ತಿದ್ದಾರೆ ಮತ್ತು ಯುವಕರು ಗುಂಪು-ಗುಂಪಾಗಿ ಹೋರಾಡುತ್ತಿದ್ದಾರೆ ಎಂದು ಆಫ್ಘಾನ್ನರು ಹೇಳಿದ್ದಾರೆ. ತಾಲಿಬಾನಿಗಳ ಅಟ್ಟಹಾಸ ಸಹಿಸದೇ ಅನೇಕರು ಕಳೆದ ವಾರವಷ್ಟೇ ಕಾಬೂಲ್​ಗೆ ಆಗಮಿಸಿದ್ದಾರೆ. ಅವರು ತಾಲಿಬಾನಿಗಳ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಜೈಲಿನ ಬಳಿ ಮೃತದೇಹಗಳನ್ನು ಬಿದ್ದಿರುವುದನ್ನು ನೋಡಿದ್ದೇವೆ. ಮೃತದೇಹಗಳ ಮಧ್ಯೆಯೇ ನಾಯಿಗಳು ಸಹ ಸತ್ತುಬಿದ್ದಿದ್ದವು ಎಂದು 36 ವರ್ಷದ ವಿಧವೆ ಫ್ರಿಬಾ ಎಂಬಾಕೆ ತಾಲಿಬಾನಿಗಳ ಕ್ರೂರ ಮುಖವಾಡವನ್ನು ಕಳಚಿದ್ದಾರೆ. 

ಅಫ್ಘಾನ್​ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿರುವವರನ್ನು ತಾಲಿಬಾನಿಗಳು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ನನ್ನ ಮಗನ ತಲೆಯನ್ನು ಕುರಿ ಕಡಿಯುವ ಹಾಗೇ ಕಡಿದು ನನ್ನ ಮುಂದೆಯೇ ಬೀಸಾಡಿದರು ಎಂದು ತಾಲಿಬಾನ್​ ಆಕ್ರಮಿತ ಕುಂದ್ಜ್​ನಿಂದ ಬಂದ ವ್ಯಕ್ತಿ ಅಬ್ದುಲ್​ಮನನ್​ ಬಿಚ್ಚಿಟ್ಟಿದ್ದಾರೆ. ದಿನನಿತ್ಯವೂ ತಾಲಿಬಾನಿಗಳ ದೌರ್ಜನ್ಯ ಮುಂದುವರಿದಿದೆ. ತಾಲಿಬಾನ್​ ಹೋರಾಟಗಾರನನ್ನು ಬಲವಂತವಾಗಿ ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ 25 ವರ್ಷ ವಿಧವೆ ಮಾರ್ವಾ ಎಂಬಾಕೆ ಅಲ್ಲಿಂದ ತಪ್ಪಿಸಿಕೊಂಡು ಕಾಬೂಲ್​ ಸೇರಿದ್ದಾಳೆ. ಆಕೆಯ 16 ವರ್ಷ ಸೋದರಸಂಬಂಧಿಯನ್ನು ಬಲವಂತವಾಗಿ ಕರೆದೊಯ್ದು ಮದುವೆ ಮಾಡಲಾಗಿದೆ ಎಂದು ತಿಳಿಸಿದ್ದಾಳೆ. ಅನೇಕ ಹುಡುಗಿಯರನ್ನು ಅಪಹರಣ ಮಾಡಲಾಗುತ್ತಿದೆ ಎಂದು ತಾಲಿಬಾನ್​ ವಿರುದ್ಧ ಆರೋಪ ಮಾಡಲಾಗಿದೆ. ಏನಿದು ಸಂಘರ್ಷ?
 ಆಫ್ಘಾನ್​ ವಲಯದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್​ ಮತ್ತು ಆಫ್ಘಾನ್​ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದೆ. ಕಳೆದ ಕೆಲವು ತಿಂಗಳುಗಳಿಂದ, ಯುದ್ಧ ಪೀಡಿತ ದೇಶದಲ್ಲಿ ತಾಲಿಬಾನ್ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಆಸ್ತಿಗಳನ್ನು ಟಾರ್ಗೆಟ್​ ಮಾಡಲು ಪಾಕಿಸ್ತಾನವು ತಾಲಿಬಾನ್​ಗೆ ಸಹಕಾರ ನೀಡುತ್ತಿರುವ ಆರೋಪವು ಕೇಳಿಬಂದಿದೆ.

ತೀವ್ರ ಘರ್ಷಣೆ ಹಿನ್ನೆಲೆಯಲ್ಲಿ ಜುಲೈ 11 ರಂದು ಕಂದಹಾರ್‌ನ ಕಾನ್ಸುಲೇಟ್‌ನಿಂದ ಭಾರತೀಯ ಸಿಬ್ಬಂದಿಯನ್ನು ಸ್ಥಳಾಂತರಿಸಿ ಮತ್ತೆ ಭಾರತಕ್ಕೆ ಕರೆತರಲಾಯಿತು. ಗುಪ್ತಚರ ವರದಿಗಳು ಕಂದಹಾರ್ ಮತ್ತು ಮಜಾರ್-ಎ-ಶೇರ್ಫ್‌ನಲ್ಲಿರುವ ಭಾರತೀಯ ದೂತಾವಾಸಗಳಿಗೆ ಬೆದರಿಕೆ ಹೆಚ್ಚಾಗಿದೆ ಎಂದು ಸೂಚಿಸಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99