-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅಶ್ಲೀಲ ವೀಡಿಯೋ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟಿಯಿಂದ ಪೊಲೀಸರಿಗೆ 15 ಲಕ್ಷ ರೂ. ಲಂಚ ಆಮಿಷ

ಅಶ್ಲೀಲ ವೀಡಿಯೋ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟಿಯಿಂದ ಪೊಲೀಸರಿಗೆ 15 ಲಕ್ಷ ರೂ. ಲಂಚ ಆಮಿಷ

ಮುಂಬೈ: ಅಶ್ಲೀಲ ವೀಡಿಯೋಗಳ ನಿರ್ಮಾಣ, ಆ್ಯಪ್​ಗಳ ಮೂಲಕ ಅಪ್​​ಲೋಡ್​ ಮಾಡುತ್ತಿದ್ದ ಆರೋಪದ ಮೇಲೆ ರಾಜ್​ ಕುಂದ್ರಾ ಬಂಧನವಾಗಿ ಒಂದೊಂದೇ ಸ್ಫೋಟಕ ವಿಚಾರಗಳು ಹೊರಬರುತ್ತಲೇ ಇವೆ. ಇದೀಗ ಮತ್ತೊಂದು ಮಾಹಿತಿ ಮುಂಬೈ ಪೊಲೀಸ್​ ಅಂಗಳದಿಂದ ಹೊರಬಿದ್ದಿದ್ದು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಟಿ, ಮಾಡೆಲ್ ಗೆಹಾನಾ ವಶಿಷ್ಠ ಇದೇ ವರ್ಷದ ಫೆಬ್ರವರಿಯಲ್ಲಿ ಮುಂಬೈನಲ್ಲಿ ಬಂಧನವಾಗಿದ್ದರು. ಆದರೆ ಆಕೆ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಭಾರೀ ಆಫರ್​ ನೀಡಿದ್ದರಂತೆ. 

ರಾಜ್​ ಕುಂದ್ರಾ ಬಂಧನದ ಬೆನ್ನಲ್ಲೇ ಗೆಹಾನಾ ವಶಿಷ್ಠ 'ರಾಜ್ ಕುಂದ್ರಾ ನಿರ್ಮಿಸುತ್ತಿದ್ದದು ಪೋರ್ನ್​ ವೀಡಿಯೋ ಅಲ್ಲ, ಎರೋಟಿಕಾ' ಎಂದು ಹೇಳಿ ಸುದ್ದಿಯಾಗಿದ್ದರು. ಅಲ್ಲಿಯವರೆಗೆ ಗೆಹಾನಾ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಬೋಲ್ಡ್​ ಹೇಳಿಕೆ ನೀಡಿದರೋ ಪ್ರಕರಣದಲ್ಲಿ ಆಕೆಯ ಹೆಸರು ಸಹ ಹೆಚ್ಚಾಗಿ ಕೇಳಲಾರಂಭಿಸಿದೆ. 

ಆಕೆ ಪೊಲೀಸರಿಗೆ ಆಮಿಷ ಒಡ್ಡಿರುವ ವಾಟ್ಸ್​ಆ್ಯಪ್​ ಚಾಟ್​ ಒಂದು ಇತ್ತೀಚೆಗಷ್ಟೇ ವೈರಲ್​ ಆಗಿದೆ. ಗೆಹಾನಾ, ತನ್ನನ್ನು ಬಂಧಿಸದಂತೆ ಪೊಲೀಸರಿಗೆ ಬರೋಬ್ಬರಿ 15 ಲಕ್ಷ ರೂ. ಲಂಚದ ಆಮಿಷ ಒಡ್ಡಿದ್ದರಂತೆ. ಆದರೆ, ಆಕೆ ಹೇಳುವ ಪ್ರಕಾರ ಪೊಲೀಸರೇ ನನ್ನ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾಳೆ. ಪ್ರಕರಣದಲ್ಲಿ ಸದ್ಯ ಬಂಧನವಾಗಿರುವ ಯಶ್​ ಠಾಕೂರ್​ ಅಲಿಯಾಸ್​ ಅರವಿಂದ್​ ಕುಮಾರ್​ ಶ್ರೀವಾತ್ಸವ ಮತ್ತು ತನ್ವೀರ್​ ಹಶ್ಮಿ ಜತೆ ಪೊಲೀಸರ ಕುರಿತು ಗೆಹಾನಾ ಚಾಟ್​ ಮಾಡಿರುವ ಸ್ಕ್ರೀನ್​ ಶಾಟ್​ ವೈರಲ್​ ಆಗಿದೆ. ಪ್ರಕರಣದಿಂದ ಹೊರ ಬರಲು ಲಂಚ ನೀಡಲು ಅವರು ಕೂಡ ಸಿದ್ಧರಾಗಿದ್ದರಂತೆ. ಆದರೆ, ಪ್ರಕರಣದಲ್ಲಿ ಸದ್ಯ ಬಂಧನವಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99