-->

ಮಾಮೂಲಿ ಕೊಡಲಿಲ್ಲ ಎಂದು ಅಮಾಯಕನ ಮೇಲೆ ಸುಳ್ಳು ಕೇಸ್​ ದಾಖಲಿಸಿದ ಲೇಡಿ ಇನ್ಸ್ಪೆಕ್ಟರ್...!!ಮುಂದೇನಾಯ್ತು ನೀವೇ ನೋಡಿ...

ಮಾಮೂಲಿ ಕೊಡಲಿಲ್ಲ ಎಂದು ಅಮಾಯಕನ ಮೇಲೆ ಸುಳ್ಳು ಕೇಸ್​ ದಾಖಲಿಸಿದ ಲೇಡಿ ಇನ್ಸ್ಪೆಕ್ಟರ್...!!ಮುಂದೇನಾಯ್ತು ನೀವೇ ನೋಡಿ...

 
ಬೆಂಗಳೂರು: ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕನ ವಿರುದ್ಧ ಸುಳ್ಳು ಕೇಸ್​ ದಾಖಲಿಸಿದ್ದ ಮಹಿಳಾ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅಮಾನತುಗೊಳಿಸಿದ್ದಾರೆ.

ಆರ್​ಎಂಸಿ ಯಾರ್ಡ್ ಪೊಲೀಸ್ ಇನ್​ಸ್ಪೆಕ್ಟರ್​ ಪಾರ್ವತಮ್ಮ ಹಾಗೂ ಸಬ್​ ಇನ್​ಸ್ಪೆಕ್ಟರ್​ ಅಂಜಿನಪ್ಪ ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇನ್​ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್ಐ ಅಂಜಿನಪ್ಪ ಮತ್ತು ಇನ್ನೊಬ್ಬ ಪೊಲೀಸ್ ಬೀದಿಬದಿ ವ್ಯಾಪಾರಿ ಬಳಿ ಮಾಮೂಲಿ ಕೇಳಿದ್ದು, ಆತ ಕೊಡಲು ನಿರಾಕರಿಸಿದ್ದಕ್ಕೆ ಬಲವಂತವಾಗಿ ಗಾಂಜಾ ಬೆರೆಸಿದ ಸಿಗರೇಟ್​ ಸೇದುವಂತೆ ಮಾಡಿ ಗಾಂಜಾ ಸೇವನೆ ಎಂದು ಕೇಸು ದಾಖಲಿಸಿದ್ದರು. ಬಳಿಕ ಇದರಿಂದ ನೊಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ. 

ಈ ಕೇಸ್ ಸಂಬಂಧ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದ್ದು, ಆಂತರಿಕ ತನಿಖೆ ವೇಳೆ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್​ ಮಾಡಲು ಹೋಗಿ ಎಸ್​ಐ ಅಂಜಿನಪ್ಪ ಸಿಕ್ಕಿಬಿದ್ದಿದ್ದ. ಈ ಮೂವರ ವಿರುದ್ಧ ನಡೆದ ಆಂತರಿಕ ತನಿಖೆಯಲ್ಲಿ ಆರೋಪ ದೃಢಪಟ್ಟು ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99