-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಇಷ್ಟವಿಲ್ಲದ ಹುಡುಗ..ಇಷ್ಟವಿಲ್ಲದ ಮದುವೆ... ಡೆತ್ ನೋಟ್ ಬರೆದು ಬಾವಿಗೆ ಹಾರಿದ ನವವಿವಾಹಿತೆ.!!

ಇಷ್ಟವಿಲ್ಲದ ಹುಡುಗ..ಇಷ್ಟವಿಲ್ಲದ ಮದುವೆ... ಡೆತ್ ನೋಟ್ ಬರೆದು ಬಾವಿಗೆ ಹಾರಿದ ನವವಿವಾಹಿತೆ.!!

 
ನಾಗೌರ್ (ರಾಜಸ್ಥಾನ):  ರಾಜಸ್ಥಾನದಲ್ಲಿ ಆಟಾ-ಸಾಟಾ ಎನ್ನುವ ಸಂಪ್ರದಾಯವಿದೆ.ಒಂದು ಮನೆಯ ಮಗಳನ್ನು ಇನ್ನೊಂದು ಮನೆಗೆ ಕೊಟ್ಟರೆ, ಆ ಮನೆಯ ಹೆಣ್ಣುಮಗಳನ್ನು ಈ ಮನೆಯ ಮಗನಿಗೆ ಕೊಡುವ ಸಂಪ್ರದಾಯವಿದು. ಈ ಸಾಂಪ್ರದಾಯಿಕ್ಕೆ ಸುಮನ್ ಚೌಧರಿ ಎಂಬ ನವವಿವಾಹಿತ ಹೆಣ್ಣುಮಗಳು ಬಲಿಯಾಗಿದ್ದಾಳೆ.

ಸುಮನ್ ಚೌಧರಿ ಎಂಬ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಸಹೋದರನಿಗೆ ಇನ್ನೊಂದು ಮನೆಯ ಹುಡುಗಿ ಇಷ್ಟವಾಗಿರುವ ಕಾರಣಕ್ಕೆ, ಸುಮನ್‌ಳಿಗೆ ಇಷ್ಟವಿಲ್ಲದಿದ್ದರೂ ಆ ಮನೆಯ ಹುಡುಗನ ಜತೆ ಮದುವೆ ಮಾಡಲಾಗಿತ್ತು. ಆದರೆ ವಿಚ್ಛೇದನಕ್ಕೂ ಈ ಸಂಪ್ರದಾಯದಲ್ಲಿ ಆಸ್ಪದವಿಲ್ಲ. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮುನ್ನ ಈಕೆ ಇಷ್ಟವಿಲ್ಲದ ಮದುವೆ, ವಿಚ್ಛೇದನಕ್ಕೂ ಅವಕಾಶವಿಲ್ಲದ ಸಂಸಾರ ಇರುವ ಆಟಾ-ಸಾಟಾ ಸಂಪ್ರದಾಯ ಏಕೆ ಬೇಕು? ಈ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುವ ಈ ಸಮಾಜಕ್ಕೆ ಧಿಕ್ಕಾರ. ಪ್ರತಿಯೊಬ್ಬರಿಗೂ ಒಳ್ಳೆಯ ಹೆಣ್ಣು ಬೇಕು, ತಮ್ಮ ಮಗನಿಗೆ ಒಳ್ಳೆಯ ಹೆಣ್ಣನ್ನು ನೋಡುತ್ತಾರೆ, ಆದರೆ ಅದೇ ಆ ಹೆಣ್ಣಿಗೆ ಒಳ್ಳೆಯ ಗಂಡನ್ನು ಆಯ್ಕೆ ಮಾಡುವ ಅವಕಾಶವೇ ಇಲ್ಲ. ನಮಗೂ ಆಸೆ ಇರುವುದಿಲ್ಲವಾ? ಇಡೀ ಹೆಣ್ಣುಕುಲಕ್ಕೆ ಕಳಂಕವಾಗಿರುವ ಈ ಸಂಪ್ರದಾಯಕ್ಕೆ ಧಿಕ್ಕಾರ, ಇನ್ನು ನಾನು ಬದುಕಿರಲಾರೆ ಎಂದು ಡೆತ್‌ನೋಟ್‌ನಲ್ಲಿ ಸುಮನ್‌ ಬರೆದಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99