-->

9 ಲಕ್ಷ ಹಣ ಕಾಪಾಡಲು ಸತತ ಮಳೆಯಲ್ಲಿ 7 ಗಂಟೆ ಕಾಲ ಬಸ್ ಏರಿ ಕುಳಿತ ಡಿಪೋ ಮ್ಯಾನೇಜರ್..

9 ಲಕ್ಷ ಹಣ ಕಾಪಾಡಲು ಸತತ ಮಳೆಯಲ್ಲಿ 7 ಗಂಟೆ ಕಾಲ ಬಸ್ ಏರಿ ಕುಳಿತ ಡಿಪೋ ಮ್ಯಾನೇಜರ್..

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಸ್​ ಡಿಪೋ ಮ್ಯಾನೇಜರ್ ಬಳಿ ಇಡೀ ದಿನ ಬಸ್​ಗಳ ಓಡಾಟದಿಂದ ಟಿಕೆಟ್​ನಲ್ಲಿ ಸಂಗ್ರಹಿಸಿದ ಆ ದಿನದ ಆದಾಯವಾದ 9 ಲಕ್ಷ ರೂ. ಹಣವಿತ್ತು. ಆದರೆ, ಭಾರೀ ಮಳೆಯಿಂದ ಆ ಬಸ್​ ಅನ್ನು ನಿಲ್ಲಿಸಿದ ಜಾಗ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಹೇಗಾದರೂ ಮಾಡಿ ಸರ್ಕಾರದ ಹಣವನ್ನು ರಕ್ಷಿಸಲೇಬೇಕೆಂದು ಆ ಬಸ್​ನ ಮೇಲೇರಿ ಕುಳಿತುಕೊಳ್ಳಲು ನಿರ್ಧರಿಸಿದರು. ಸತತ 7 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿ ಬಸ್​ನ ಮೇಲೆ ಹತ್ತಿ ಕುಳಿತಿದ್ದರು.ಬಸ್ ಡಿಪೋ ಮ್ಯಾನೇಜರ್​ನ ಈ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಪೋ ಮ್ಯಾನೇಜರ್ ಶಿರ್ಕೆ, ‘ನೀರಿನ ಮಟ್ಟ ನಿಮಿಷದಿಂದ ನಿಮಿಷಕ್ಕೆ ಏರುತ್ತಲೇ ಇತ್ತು. ಡಿಪೋ ಆಫೀಸಿನೊಳಗೆ ಹಣವನ್ನು ಇಟ್ಟರೆ ಆ ಆಫೀಸಿನೊಳಗೆ ನೀರು ನುಗ್ಗಿ ಹಣ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿತ್ತು. ಪ್ರತಿದಿನದ ಆದಾಯವನ್ನು ಜೋಪಾನವಾಗಿ ತಲುಪಬೇಕಾದಲ್ಲಿಗೆ ತಲುಪಿಸಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ಹೀಗಾಗಿ, ನನ್ನ ಜೀವದ ಬಗ್ಗೆಯೂ ಯೋಚನೆ ಮಾಡದೆ ಆ ಹಣವನ್ನು ರಕ್ಷಣೆ ಮಾಡಲು ಯೋಚಿಸಿದಾಗ ಬಸ್​ನ ಮೇಲ್ಭಾಗ ಕಾಣಿಸಿತು. ಬೇರೆ ಬಸ್​ಗಳೆಲ್ಲ ಮುಳುಗುವ ಹಂತದಲ್ಲಿದ್ದವು. ಆದರೆ, ಸ್ವಲ್ಪ ಎತ್ತರದ ಜಾಗದಲ್ಲಿ ನಿಲ್ಲಿಸಿದ್ದ ಒಂದು ಬಸ್​ ಮುಳುಗುವಷ್ಟು ನೀರು ಬರಲಾರದು ಎಂಬ ಧೈರ್ಯದಿಂದ ಆ ಬಸ್​ ಏರಿ ಕುಳಿತೆ’ ಎಂದು ಹೇಳಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99