![9 ಲಕ್ಷ ಹಣ ಕಾಪಾಡಲು ಸತತ ಮಳೆಯಲ್ಲಿ 7 ಗಂಟೆ ಕಾಲ ಬಸ್ ಏರಿ ಕುಳಿತ ಡಿಪೋ ಮ್ಯಾನೇಜರ್.. 9 ಲಕ್ಷ ಹಣ ಕಾಪಾಡಲು ಸತತ ಮಳೆಯಲ್ಲಿ 7 ಗಂಟೆ ಕಾಲ ಬಸ್ ಏರಿ ಕುಳಿತ ಡಿಪೋ ಮ್ಯಾನೇಜರ್..](https://lh3.googleusercontent.com/-UbJIg094ivA/YP_ce70EFOI/AAAAAAAAuT0/9IFNJ2a-KowQyZL3xWIRefu6euoE-Ms7QCLcBGAsYHQ/s1600/1627380739431794-0.png)
9 ಲಕ್ಷ ಹಣ ಕಾಪಾಡಲು ಸತತ ಮಳೆಯಲ್ಲಿ 7 ಗಂಟೆ ಕಾಲ ಬಸ್ ಏರಿ ಕುಳಿತ ಡಿಪೋ ಮ್ಯಾನೇಜರ್..
Tuesday, July 27, 2021
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಸ್ ಡಿಪೋ ಮ್ಯಾನೇಜರ್ ಬಳಿ ಇಡೀ ದಿನ ಬಸ್ಗಳ ಓಡಾಟದಿಂದ ಟಿಕೆಟ್ನಲ್ಲಿ ಸಂಗ್ರಹಿಸಿದ ಆ ದಿನದ ಆದಾಯವಾದ 9 ಲಕ್ಷ ರೂ. ಹಣವಿತ್ತು. ಆದರೆ, ಭಾರೀ ಮಳೆಯಿಂದ ಆ ಬಸ್ ಅನ್ನು ನಿಲ್ಲಿಸಿದ ಜಾಗ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಹೇಗಾದರೂ ಮಾಡಿ ಸರ್ಕಾರದ ಹಣವನ್ನು ರಕ್ಷಿಸಲೇಬೇಕೆಂದು ಆ ಬಸ್ನ ಮೇಲೇರಿ ಕುಳಿತುಕೊಳ್ಳಲು ನಿರ್ಧರಿಸಿದರು. ಸತತ 7 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿ ಬಸ್ನ ಮೇಲೆ ಹತ್ತಿ ಕುಳಿತಿದ್ದರು.ಬಸ್ ಡಿಪೋ ಮ್ಯಾನೇಜರ್ನ ಈ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಪೋ ಮ್ಯಾನೇಜರ್ ಶಿರ್ಕೆ, ‘ನೀರಿನ ಮಟ್ಟ ನಿಮಿಷದಿಂದ ನಿಮಿಷಕ್ಕೆ ಏರುತ್ತಲೇ ಇತ್ತು. ಡಿಪೋ ಆಫೀಸಿನೊಳಗೆ ಹಣವನ್ನು ಇಟ್ಟರೆ ಆ ಆಫೀಸಿನೊಳಗೆ ನೀರು ನುಗ್ಗಿ ಹಣ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿತ್ತು. ಪ್ರತಿದಿನದ ಆದಾಯವನ್ನು ಜೋಪಾನವಾಗಿ ತಲುಪಬೇಕಾದಲ್ಲಿಗೆ ತಲುಪಿಸಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ಹೀಗಾಗಿ, ನನ್ನ ಜೀವದ ಬಗ್ಗೆಯೂ ಯೋಚನೆ ಮಾಡದೆ ಆ ಹಣವನ್ನು ರಕ್ಷಣೆ ಮಾಡಲು ಯೋಚಿಸಿದಾಗ ಬಸ್ನ ಮೇಲ್ಭಾಗ ಕಾಣಿಸಿತು. ಬೇರೆ ಬಸ್ಗಳೆಲ್ಲ ಮುಳುಗುವ ಹಂತದಲ್ಲಿದ್ದವು. ಆದರೆ, ಸ್ವಲ್ಪ ಎತ್ತರದ ಜಾಗದಲ್ಲಿ ನಿಲ್ಲಿಸಿದ್ದ ಒಂದು ಬಸ್ ಮುಳುಗುವಷ್ಟು ನೀರು ಬರಲಾರದು ಎಂಬ ಧೈರ್ಯದಿಂದ ಆ ಬಸ್ ಏರಿ ಕುಳಿತೆ’ ಎಂದು ಹೇಳಿದ್ದಾರೆ