-->

 ಪ್ರಿಯತಮೆಯೊಂದಿಗೆ ಜಗಳ - ಪ್ರಾಣಬಿಟ್ಟ ಪ್ರಿಯತಮ ..

ಪ್ರಿಯತಮೆಯೊಂದಿಗೆ ಜಗಳ - ಪ್ರಾಣಬಿಟ್ಟ ಪ್ರಿಯತಮ ..


    ನವದೆಹಲಿ: ನೊಯ್ಡಾದ ಗರ್ಹಿ ಚೌಖಂಡಿ ನಿವಾಸಿ ಆಕಾಶ್ ಎಂಬಾತ ತನ್ನ ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿದ ನಂತರ ಮುಸ್ಸೂರಿ ಗ್ಯಾಂಗ್​ ಕಾಲುವೆಗೆ ಹಾರಿ ಮೃತಪಟ್ಟಿದ್ದಾನೆ. ಗಾಬರಿಯಿಂದ ಯುವತಿಯೂ ಕಾಲುವೆಗೆ ಹಾರಿದ್ದಾಳೆ. ಆದರೆ ಹತ್ತಿರದಲ್ಲೇ ಇದ್ದ ಸ್ಥಳೀಯರು   ಯುವತಿಯನ್ನು ರಕ್ಷಿಸಿದ್ದಾರೆ. 

    ಬುಧವಾರ ಬೆಳಗ್ಗೆ ಮುಸ್ಸೂರಿ ರೈಲ್ವೆ ಬ್ರಿಡ್ಜ್​​ ಬಳಿ ಯುವತಿ ಹಾಗೂ ಪ್ರಿಯಕರನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಯುವತಿಯು ತನ್ನ​ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾಳೆ. ಅಷ್ಟೊತ್ತಿಗಾಗಲೇ ಆಕಾಶ್ ಕಾಲುವೆಗೆ ಹಾರಿದ್ದು, ಹೆದರಿದ ಯುವತಿಯೂ ಕಾಲುವೆಗೆ ಹಾರಿದ್ದಾಳೆ. 

    ಈ ಘಟನೆಯ ನಂತರ ಆಕಾಶ್ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.ಆಕಾಶ್ ಪೋಷಕರು ತನ್ನ ಮಗನ ಸಾವಿಗೆ ಯುವತಿ ಮತ್ತು ಆಕೆ ಗೆಳೆಯರೇ ಕಾರಣ ಎಂದು ಆರೋಪಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99