-->

ಆಕೆ ಪ್ರೀತಿಸಿದೆ ತಪ್ಪಾ ? ಏನಿದು ವಿಚಿತ್ರ ಲವ್ ಕಹಾನಿ?

ಆಕೆ ಪ್ರೀತಿಸಿದೆ ತಪ್ಪಾ ? ಏನಿದು ವಿಚಿತ್ರ ಲವ್ ಕಹಾನಿ?

ಮುದ್ದೇಬಿಹಾಳ:  ಜೂನ್​​​​​ 9ರಂದು ಅಪ್ರಾಪ್ತೆಯ ಮೃತದೇಹ    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಸೇತುವೆ ಕೆಳಗೆ ಪತ್ತೆಯಾಗಿತ್ತು. ಇದೀಗ ಮೃತದೇಹದ ಗುರುತು ಪತ್ತೆಯಾಗಿದ್ದು, ಕೊಲೆಯಾಗಿರುವ ಯುವತಿ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್​​​ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಮಲ್ಲಪ್ಪ ಬಿಲ್ಲಾಡ (17) ಎಂದು ಗುರುತಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಆನಂದ ವಾಘಮೋಡೆ, ಕೊಲೆಯಾಗಿರುವ ಅಪ್ರಾಪ್ತೆಗೆ ತಂದೆಯಿಲ್ಲ, ತಾಯಿ ಇದ್ದಾರೆ. ಇವರ ಮನೆಯ ಆಗುಹೋಗುಗಳನ್ನು ಯುವತಿಯ ಸೋದರ ಮಾವ ನೋಡಿಕೊಳ್ಳುತ್ತಿದ್ದ. ಯುವತಿಯನ್ನು ಆತನೇ ರಾತ್ರಿ ಮನೆಯಿಂದ ಕರೆದೊಯ್ದಿದ್ದ ಎಂದು ಮೃತಳ ತಾಯಿ ತಿಳಿಸಿದ್ದಾಳೆ. ಈ ಕೃತ್ಯವನ್ನು ಸಿದ್ದರಾಮಪ್ಪನೇ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.

ಸೋದರಮಾವನ ಮಾತು ಕೇಳದೇ ಬೇರೊಬ್ಬನನ್ನು ಪ್ರೀತಿಸಿದ್ದಕ್ಕೆ ಆರತಿಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99