ಸುದ್ದಿಗಳು
ಲೋಡ್ ಆಗುತ್ತಿದೆ...

ಕೊರೋನ ಸೋಂಕಿತೆ ಬಳಿಯಿದ್ದ ಚಿನ್ನ ಕಳವು: ಆಸ್ಪತ್ರೆ ಸಿಬ್ಬಂದಿ ಮಾಡಿದ ನೀಚ ಕೃತ್ಯ ಎಂತದ್ದು?

 ಬೆಂಗಳೂರು:  ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಸೋಂಕಿತೆ ಬಳಿ ಚಿನ್ನ ಮತ್ತು ಮೊಬೈಲ್​ ಕಳವು ಮಾಡಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬಾಣಸವಾಡಿಯ ಎಂ.ಜಗನ್ನಾಥ್​ ದೂರು ನೀಡಿದ್ದಾರೆ. ಜಗನ್ನಾಥ್​ ಅವರು ತಮ್ಮ ತಾಯಿ ಇಂದಿರಾ ಅವರನ್ನು ಕರೊನಾ ಚಿಕಿತ್ಸೆಗಾಗಿ ಮೇ 11ರಂದು ಕ್ಯೂರಾ ಆಸ್ಪತ್ರೆಗೆ ದಾಖಲಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಜೊತೆಗೆ ವಿಡಿಯೋ ಕಾಲ್​ ಮಾಡಿ ಮಗ ಮಾತನಾಡುತ್ತಿದ್ದರು. ಮೇ 16ರಂದು ವಿಡಿಯೋ ಕಾಲ್​ ಮಾಡಿದಾಗ ಇಂದಿರಾ ಕತ್ತಿನಲ್ಲಿ ಚಿನ್ನದ ಸರ ನಾಪತ್ತೆಯಾಗಿತ್ತು. ಇದರ ಅನ್ವಯ ಕಮ್ಮನಹಳ್ಳಿಯ ಕ್ಯೂರಾ ಆಸ್ಪತ್ರೆ ವಿರುದ್ಧ ಎ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣಕ್ಕೆ ಚಿನ್ನದ ಸರ ತೆಗೆದಿರಬೇಕೆಂದು ಸುಮ್ಮನಾಗಿದ್ದರು. ಕೊನೆಗೆ ಚಿಕಿತ್ಸೆ ಲಿಸದೆ ಇಂದಿರಾ ಮೇ 19 ರಂದು ಅಸುನೀಗಿದ್ದರು. ಶವ ಸಂಸ್ಕಾರದ ಬಳಿಕ ಇಂದಿರಾ ಬಳಿಯಿದ್ದ ಚಿನ್ನದ ಸರ ಮತ್ತು ಮೊಬೈಲ್​ ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಸೂಕ್ತ ಉತ್ತರ ಕೊಟ್ಟಿಲ್ಲ. ಆಸ್ಪತ್ರೆ ಸಿಬ್ಬಂದಿಯೇ ಕಳ್ಳತನ ಮಾಡಿರಬೇಕೆಂದು ದೂರಿನಲ್ಲಿ ಜಗನ್ನಾಥ್​ ಉಲ್ಲೇಖಿಸಿದ್ದಾರೆ. ಇದರ ಅನ್ವಯ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಸುದ್ದಿ ಹಂಚಿಕೊಳ್ಳಿ:
ಇತ್ತೀಚಿನ ಸುದ್ದಿಗಳು
×

WhatsApp Channel

ಬ್ರೇಕಿಂಗ್ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

JOIN NOW