-->

50 ಲಕ್ಷ ಖರ್ಚು ಮಾಡಿ ಕೊರೊನಾ ಗೆದ್ದಳು.... ಆದರೆ....

50 ಲಕ್ಷ ಖರ್ಚು ಮಾಡಿ ಕೊರೊನಾ ಗೆದ್ದಳು.... ಆದರೆ....

ಪೆದ್ದಪಲ್ಲಿ​: ವೈವಾಹಿಕ ಜೀವನದಲ್ಲಿ ಕಾಲಿಡಲು ಸ್ವದೇಶಕ್ಕೆ ಆಗಮಿಸಿದ್ದ ಯುವತಿಗೆ ಕೋವಿಡ್ ಸೋಂಕು ತಗುಲಿ ಅದರಿಂದ ಗುಣಮುಖಳಾಗಿ  ಮತ್ತೆ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೋದಾವರಿಖನಿಯಲ್ಲಿ ನಡೆದಿದೆ.

ಸ್ಥಳೀಯ ಎನ್​​ಟಿಪಿಸಿ ಕೃಷ್ಣನಗರದ ಪೆಂಡ್ಯಾಲ ರವೀಂದ್ರ ​ರೆಡ್ಡಿ ಎಂಬವರ ಮಗಳು ನರಿಷ್ಮರೆಡ್ಡಿ (28) ಹೈದರಾಬಾದ್​ನಲ್ಲಿ ಎಂಜಿನಿಯರಿಂಗ್​ ಪದವಿ ಪಡೆದು ಏಳೂವರೆ ವರ್ಷಗಳ ಹಿಂದೆ ಅಮೆರಿಕಗೆ ತೆರಳಿದ್ದರು. ಮೇ ತಿಂಗಳ ಕೊನೆಯಲ್ಲಿ ಮದುವೆ ನಿಶ್ಚಯವಾಗಿದ್ದರಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದರು
ಕೆಲಸದ ನಿಮಿತ್ತ ನರಿಷ್ಮ ಚೆನ್ನೈಗೆ ಹೋಗಿ ಬಂದ ಮೇಲೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕಾಗಿ ಚಿಕಿತ್ಸೆ ಪಡೆದ ಅವರು ಕೋವಿಡ್​ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದಾದ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 40 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಯುವತಿ ಸಾವನ್ನಪ್ಪಿದ್ದಾಳೆ.

ಮಗಳ ಚಿಕಿತ್ಸೆಗೆ ಸುಮಾರು 50 ಲಕ್ಷ ರೂ ಖರ್ಚು ಮಾಡಿದ್ದೇವೆ. ಆದ್ರೂ ಆಕೆ ಬದುಕುಳಿಯಲಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99