ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

CCTV VIDEO; ಮಂಗಳೂರಿನಲ್ಲಿ ನಡೆಯಿತು ಭೀಕರ ಅಪಘಾತ- ಕೆಟಿಎಂ ಬೈಕ್ ಸವಾರ ಸಾವು


ಮಂಗಳೂರು; ಮಂಗಳೂರಿನ ಪದವಿನಂಗಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೆಟಿಎಂ ಬೈಕ್ ಸವಾರ ಸಾವನ್ನಪ್ಪಿದ್ದಾರೆ.



ಇಂದು ಮುಂಜಾನೆ ಈ ಅಪಘಾತ ನಡೆದಿದೆ. ನೀರುಮಾರ್ಗದಲ್ಲಿ ಕೆಲಸದಲ್ಲಿರುವ ಪ್ರಶಾಂತ್ ಕೆಟಿಎಂ ಬೈಕ್ ನಲ್ಲಿ ವೇಗದಲ್ಲಿ ಬರುತ್ತಿದ್ದ ವೇಳೆ ನಿಂತಿದ್ದ ಸ್ಕೂಟರ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಪಕ್ಕದ ಅಂಗಡಿಯ ಎದುರಿನಲ್ಲಿದ್ದ ಕೂಲ್ ಡ್ರಿಂಕ್ಸ್ ಬಾಟಲಿ ಬಾಕ್ಸ್ ಗೆ ಗುದ್ದಿದ್ದಾರೆ. 

ಈ ವೇಳೆ ಬೈಕ್ ನಿಂದ ಎಸೆಯಲ್ಪಟ್ಟು ಆತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಇದೇ ವೇಳೆ ಅಪಘಾತದಿಂದ ಬಿದ್ದ ಕೆಟಿಎಂ  ಬೈಕ್ ಗೆ  ಚಲಿಸುತ್ತಿದ್ದ ಬೈಕ್ ಡಿಕ್ಕಿಯಾಗಿದ್ದು ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. 
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW