-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಈ ಊರಿನಲ್ಲಿ ಒಂದೇ ದಿನ 18-21 ವಯಸ್ಸಿನ ಮೂವರು ಯುವತಿಯರು ನಾಪತ್ತೆ- ಕಾರಣ ನಿಗೂಢ!

ಈ ಊರಿನಲ್ಲಿ ಒಂದೇ ದಿನ 18-21 ವಯಸ್ಸಿನ ಮೂವರು ಯುವತಿಯರು ನಾಪತ್ತೆ- ಕಾರಣ ನಿಗೂಢ!


ಹೈದರಾಬಾದ್; ಹೈದರಾಬಾದ್ ನಲ್ಲಿ ಯುವತಿಯರ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿರುವ ನಡುವೆ ಒಂದೇ ದಿನ ಮೂರು ಯುವತಿಯರು ನಾಪತ್ತೆಯಾಗಿರುವುದು ವರದಿಯಾಗಿದೆ.

 ಸುನಿತಾ ಭವಾನಿ (21) ಎಂಬ ಯುವತಿ ವೆಂಕಟಗಿರಿ ವಾಟರ್​ ಟ್ಯಾಂಕ್​ ಬಳಿ ವಾಸವಿದ್ದು ಜೂನಿಯರ್​ ಆರ್ಟಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ತಾಯಿಗೆ ಕರೆ ಮಾಡಿ  ಜೂನಿಯರ್​ ಆರ್ಟಿಸ್ಟ್​ ಆಗಿ 1 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಈಗಲೇ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಳು. ಮನೆಗೆ ಹಿಂದಿರುತ್ತೇನೆಂದು ಹೇಳಿದ ಮಗಳು ಬರದೆ  ಇರುವುದರಿಂದ  ಆಕೆಯ ತಾಯಿ ಇದೀಗ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ  ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ  ಕಮ್ಮೊಲ್ಲಾ ಸಿರಿಶಾ (21) ಎಂಬ ಯುವತಿ ನಾಪತ್ತೆಯಾಗಿದ್ದಾಳೆ. ಈಕೆ ಜುಬಿಲಿ ಹಿಲ್ಸ್​ ಠಾಣಾ ವ್ಯಾಪ್ತಿಯ ಅಂಬೇಡ್ಕರ್​ ನಗರದ ನಿವಾಸಿ. 27ರಂದು ದಿನಸಿ ತರಲು ಅಂಗಡಿಗೆ ಹೋದವಳು ಮರಳಿ ಬಂದಿಲ್ಲ. ಈಕೆ ನಾಪತ್ತೆಯಾಗಿರುವ ಬಗ್ಗೆ ತಂದೆ ಜುಬಿಲಿ ಹಿಲ್ಸ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಮತ್ತೊಂದು ನಾಪತ್ತೆ ಪ್ರಕರಣ ಮಲ್ಕಜ್​ಗಿರಿಯಲ್ಲಿ ನಡೆದಿದೆ. ಜಯಂತ್​ ಎಂಬವರು ತನ್ನ ಮಗಳು ಅನುಷ್ಕಾಳನ್ನು (18)  ಪೂರ್ವ ಗೋದಾವರಿ ಜಿಲ್ಲೆಯ ಗಂಗಾಧರ ಗ್ರಾಮದಿಂದ  ಮಲ್ಕಜ್​ಗಿರಿಯ ಮಾರುತಿನಗರದ ನೆಂಟರ ಮನೆಗೆ ಕರೆತಂದಿದ್ದ. ಮೇ 27ರಂದು ಬೆಳಗ್ಗೆ ಮನೆಯಿಂದ ಹೊರ ಹೋದ ಅನುಷ್ಕಾ ಮರಳಿ ಬಂದಿಲ್ಲ ಎಂದು ದೂರು ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99