-->
ಸಂಪತ್ ರಾಜ್ ವಿರುದ್ದ ಸುರ್ಜೆವಾಲಗೆ ಜಮೀರ್ ಅಹ್ಮದ್ ಕಂಪ್ಲೆಂಟ್- ಅಖಂಡ ಪರ ಬ್ಯಾಟಿಂಗ್

ಸಂಪತ್ ರಾಜ್ ವಿರುದ್ದ ಸುರ್ಜೆವಾಲಗೆ ಜಮೀರ್ ಅಹ್ಮದ್ ಕಂಪ್ಲೆಂಟ್- ಅಖಂಡ ಪರ ಬ್ಯಾಟಿಂಗ್

 



ಬೆಂಗಳೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್  ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ  ಸಂಪತ್ ರಾಜ್ ವಿರುದ್ದ ದೂರು ನೀಡಿದ್ದಾರೆ.


ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಅವರು ರಣದೀಪ್ ಸುರ್ಜೇವಾಲಾಗೆ  ಮನವಿ ನೀಡಿದ್ದಾರೆ. ಬೆಂಗಳೂರಿನಲ್ಲಿ ರಣದೀಪ್ ಸುರ್ಜೇವಾಲಾ  ಭೇಟಿ ಮಾಡಿದ ಅವರು ಸಂಪತ್ ರಾಜ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಅನ್ಯಾಯವಾಗಿದೆ. ಅವರ ಪರವಾಗಿ ನಾನಿದ್ದೇನೆ. ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಜಿ‌ ಮೇಯರ್ ಸಂಪತ್ ರಾಜ್ ಕೈವಾಡ ಪ್ರೂವ್ ಆಗಿದ್ದು ಜೈಲಿಗೆ ಹೋಗಿ ಬಂದಿದ್ದಾರೆ.  ಆದರೆ ಘಟನೆ ನಡೆದು ಮೂರು ತಿಂಗಳು ಪಕ್ಷ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.

ಕೆಪಿಸಿಸಿ  ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಈ ಕಡೆ ಗಮನಹರಿಸದಿರಬಹುದು ಎಂದರು.ಸಂಪತ್ ರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು.  ಡಿ.ಕೆ.ಶಿವಕುಮಾರ್ ಜೊತೆಗೂ ಮಾತನಾಡುತ್ತೇನೆ.  ಸಂಪತ್ ರಾಜ್ ಮೇಲೆ ಕ್ರಮ ಆಗಲೇಬೇಕು ಎಂದು  ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್  ಅವರು ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.

Ads on article

Advertise in articles 1

advertising articles 2

Advertise under the article