-->

ಫೈನಲ್ ಆಯಿತಾ ಸಚಿವರ ಪಟ್ಟಿ- ಕೋಟ OUT ಅಂಗಾರ IN?

ಫೈನಲ್ ಆಯಿತಾ ಸಚಿವರ ಪಟ್ಟಿ- ಕೋಟ OUT ಅಂಗಾರ IN?



ಮಂಗಳೂರು: ಯಡಿಯೂರಪ್ಪ ಸರಕಾರದಲ್ಲಿ ನೂತನ ಸಚಿವರು ಯಾರಾಗುತ್ತಾರೆ ಎಂಬ ಕುತೂಹಲ ರಾಜ್ಯಾದ್ಯಂತ ಇದೆ. ಒಂದು ಹಂತದಲ್ಲಿ ಹೊಸದಾಗಿ ಸಚಿವರ ಏಳು ಮಂದಿಯ ಹೆಸರು ಫೈನಲ್ ಆಗಿದೆ. ಏಳು ಮಂದಿಯ ಹೆಸರು ಫೈನಲ್ ಆಗಿದ್ದರೂ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಈ ಕಾರಣದಿಂದ ಊಹಪೋಹವೆ ಎಲ್ಲೆಡೆ ಹಬ್ಬಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟದ ಕುತೂಹಲ ಗರಿಗೆದರಿದೆ. ಸುಳ್ಯ ಶಾಸಕ ಅಂಗಾರ ಅವರು ಮಂತ್ರಿಯಾಗುತ್ತಾರೆಯೆ ಎಂಬುದು ಎಲ್ಲರ ಕುತೂಹಲವಾಗಿದ್ದು ಇದಕ್ಕೆ ಹೌದು ಎನ್ನುವ ಉತ್ತರವು ಸಿಕ್ಕಿದೆ. ಈ ಬಾರಿ ಅಂಗಾರ ಅವರಿಗೆ ಸಚಿವ ಸ್ಥಾನ ಒಲಿಯುವುದು ಪಕ್ಕಾ ಆಗಿದೆ. ಮುಖ್ಯಮಂತ್ರಿಗಳು ಖುದ್ದಾಗಿ ಶಾಸಕ ಅಂಗಾರರಿಗೆ ಪೋನ್ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದು ಅದರಂತೆ ಅಂಗಾರ ಅವರು ಬೆಂಗಳೂರಿಗೆ ತೆರಳಿದ್ದಾರೆ.


ಇನ್ನು ಅಂಗಾರರಿಗೆ ಸಚಿವ ಸ್ಥಾನ ಸಿಕ್ಕರೆ , ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವುದು ಪಕ್ಕಾ ಆಗಿದೆ. ನಾಳೆಯ ಸಚಿವ ಸಂಪುಟ ವಿಸ್ತರಣೆ ವೇಳೆ ಅವರನ್ನು ಕೈಬಿಡುವುದು ಪಕ್ಕಾ ಎಂಬ ಸುದ್ದಿಗಳು ಹರಿದಾಡುತ್ತಿದೆ

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99