-->
ಬೆಳ್ತಂಗಡಿಯಲ್ಲಿ ಯಮನಾಗಿ ಬಂದ ಲಾರಿ: 22 ವರ್ಷದ ಯುವಕ ಸಾವು

ಬೆಳ್ತಂಗಡಿಯಲ್ಲಿ ಯಮನಾಗಿ ಬಂದ ಲಾರಿ: 22 ವರ್ಷದ ಯುವಕ ಸಾವು


(ಗಲ್ಫ್ ಕನ್ನಡಿಗ) ಮಂಗಳೂರು: ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿ ಸ್ಕೂಟಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ 22 ವರ್ಷದ ಯುವಕನೊಬ್ಬ ಸ್ಥಳದಲ್ಲಿಯೇ  ಸಾವನ್ನಪ್ಪಿದ ಘಟನೆ ನಡೆದಿದೆ.

(ಗಲ್ಫ್ ಕನ್ನಡಿಗ) ಬೆಳ್ತಂಗಡಿ ತಾಲೂಕಿನ ಗರ್ಡಾಡಿ ನಿವಾಸಿ ಗಿರೀಶ್ ಮೂಲ್ಯ ( 22) ಸಾವನ್ನಪ್ಪಿದವರು. ತಾಲೂಕಿನ ಪಡಂಗಿ ಗ್ರಾಮದ ಬದ್ಯಾರು ಎಂಬಲ್ಲಿ ಈ ಘಟನೆ ನಡೆದಿದೆ. 

(ಗಲ್ಫ್ ಕನ್ನಡಿಗ) ಬೆಳ್ತಂಗಡಿಯ  ಆಳದಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಿರೀಶ್ ಮೂಲ್ಯ ಲಾರಿಯಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article