
ದ.ಕ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ದಲ್ಲಿ ನಾಳೆ ಬೆಳಿಗ್ಗೆ ವರೆಗೆ ರೆಡ್ ಅಲರ್ಟ್!- ಉಳಿದ ಜಿಲ್ಲೆಯ ಸ್ಥಿತಿ ಏನು? ಇಲ್ಲಿದೆ ಮಾಹಿತಿ
Saturday, August 8, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ರಾಜ್ಯದಲ್ಲಿ ನಾಳೆ ಬೆಳಿಗ್ಗೆ ವರೆಗೆ ಹಲವು ಭಾರಿ ಮಳೆ ಸಾಧ್ಯತೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
(ಗಲ್ಫ್ ಕನ್ನಡಿಗ)ರಾಜ್ಯದಲ್ಲಿ ಇಂದು ಮಧ್ಯಾಹ್ನ 1 ಗಂಟೆಯಿಂದ ನಾಳೆ ಬೆಳಿಗ್ಗೆ 8.30 ವರೆಗೆ ಸುರಿಯಲಿರುವ ಮಳೆ ವಿವರಗಳು
(ಗಲ್ಫ್ ಕನ್ನಡಿಗ)ರೆಡ್ ಅಲರ್ಟ್ ಜಿಲ್ಲೆಗಳು;ದ.ಕ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ದಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ಭಾರಿ ಮಳೆ ಬೀಳಲಿದ್ದು 204.5 ಮಿ. ಮೀ ಗಿಂತ ಜಾಸ್ತಿ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
(ಗಲ್ಫ್ ಕನ್ನಡಿಗ)ಆರೆಂಜ್ ಅಲರ್ಟ್ ಜಿಲ್ಲೆಗಳು; ಉತ್ತರ ಕನ್ನಡ, ಹಾಸನ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಎಚ್ಚರಿಸಲಾಗಿದೆ. ಇಲ್ಲಿಯೂ ಭಾರಿ ಮಳೆ ಸುರಿಯಲಿದ್ದು 115.6 ಮಿ. ಮೀ ನಿಂದ 204.4 ಮಿ. ಮೀ ವರೆಗೆ ಮಳೆ ಸುರಿಯಬಹುದೆಂದು ಅಂದಾಜಿಸಲಾಗಿದೆ.
(ಗಲ್ಫ್ ಕನ್ನಡಿಗ)ಯೆಲ್ಲೋ ಅಲರ್ಟ್; ಚಾಮರಾಜನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ.