-->

Bsnl ಸಿಬ್ಬಂದಿಗಳು ದೇಶದ್ರೋಹಿಗಳೆಂಬ ಹೇಳಿಕೆ;  ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ದ  ಸಿಐಟಿಯು ಆಕ್ರೋಶ

Bsnl ಸಿಬ್ಬಂದಿಗಳು ದೇಶದ್ರೋಹಿಗಳೆಂಬ ಹೇಳಿಕೆ; ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ದ ಸಿಐಟಿಯು ಆಕ್ರೋಶ

 

ಕಾರವಾರ - ಸಂಸದ ಅನಂತ ಕುಮಾರ್ ಹೆಗಡೆಯವರು ಹೇಳಿದ ದೇಶದ್ರೋಹದ ಮಾತುಗಳಿಗೆ ಸಿಐಟಿಯು ತೀವ್ರ ಖಂಡನೆ ಮಾಡಿದೆ. ಸಂಸದರು ತಮ್ಮ ಹೇಳಿಕೆ ವಾಪಸ್ಸು ಪಡೆದು, ದೇಶದ ಸಾರ್ವಜನಿಕರಂಗದ ಉದ್ಯೋಗಿಗಳ ಮತ್ತು ಜನತೆಯ ಕ್ಷಮೆ ಕೋರಬೇಕೆಂದು ಸಿಐಟಿಯು ಒತ್ತಾಯಿಸಿದೆ.

ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರು "85 ಸಾವಿರ ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು. ಬಿಎಸ್ಎನ್ಎಲ್ ಅನ್ನು ಖಾಸಗೀಕರಣಗೊಳಿಸಲಾಗುವುದು. ಅವರನ್ನು ಉದ್ಯೋಗದಿಂದ ಹೊರಹಾಕಲಾಗುವುದು" ಎಂದು ಘೋಷಿಸಿದ್ದಾರೆ. ಈ ಪ್ರಕೋಪ ಏಕೆ? ಬಿಎಸ್ಎನ್ಎಲ್ ಒಂದು ಸಾರ್ವಜನಿಕ ರಂಗದ ಸಂಸ್ಥೆ. ಇದು  ಮುಖೇಶ್ ಅಂಬಾನಿಯ ಜಿಯೋನಂತಹ ಬಿಜೆಪಿ ಅಚ್ಚುಮೆಚ್ಚಿನ  ಕಾರ್ಪೊರೇಟ್‌ಗಳ ಲಾಭವನ್ನು ಹೆಚ್ಚಿಸಲು ಸರ್ಕಾರ ಮಾಡುತ್ತಿರುವ  ಪ್ರಯತ್ನಗಳಿಗೆ ಒಂದು ಅಡಚಣೆಯಾಗಿದೆ. ಸರ್ಕಾರ ಒಂದು ನೀತಿಯಂತೆ ಅನೇಕ ವರ್ಷಗಳಿಂದ ಬಿಎಸ್ಎನ್ಎಲ್ ಅನ್ನು ಸಂಪನ್ಮೂಲಗಳ ಕೊರತೆಗೆ ಗುರಿಯಾಗಿಸಿ ಮುಚ್ಚಲು ಪ್ರಯತ್ನಿಸುತ್ತಿದೆ. ಪ್ರತಿಯೊಬ್ಬ ಖಾಸಗಿ ಆಪರೇಟರ್‌ಗಳು 4 ಜಿ ಯೊಂದಿಗೆ ಸೇವೆಗಳನ್ನು ಒದಗಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ 5 ಜಿ ಅನ್ನು ಪರಿಚಯಿಸಬಹುದು ಆದರೆ ಸರ್ಕಾರ ಇಲ್ಲಿಯವರೆಗೆ ಬಿಎಸ್ಎನ್ಎಲ್. ಗೆ 4 ಜಿ ಸ್ಪೆಕ್ಟ್ರಮ್ ‌ನೀಡಲು ನಿರಾಕರಿಸುತ್ತಿದೆ ಮತ್ತು ಇದು 2 ಜಿ ಮತ್ತು 3 ಜಿ ಯೊಂದಿಗೆ ಕೆಲಸ ಮಾಡಲು ಒತ್ತಾಯಿಸಲ್ಪಟ್ಟಿದೆ. ಮಾರ್ಚ್ 2020 ರಲ್ಲಿ 4 ಜಿ ಸ್ಪೆಕ್ಟ್ರಮ್ ನೀಡುವುದಾಗಿ ಇತ್ತೀಚಿನ ಭರವಸೆ ನೀಡಲಾಗಿದ್ದರೂ ಏನೂ ಆಗಲಿಲ್ಲ. ಎರಡು ದಿನಗಳ ಮೊದಲು ಬಿಎಸ್‌ಎನ್‌ಎಲ್ ಕಾರ್ಮಿಕರು 4 ಜಿ  ಗಾಗಿ ಒತ್ತಾಯಿಸಿ ಟ್ವಿಟರ್ ಅಭಿಯಾನ ನಡೆಸಿದರು. ಬಿಎಸ್ಎನ್ಎಲ್ ಇಡೀ ದೇಶಕ್ಕೆ ಮತ್ತು ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಖಾಸಗಿ ನಿರ್ವಾಹಕರ ಲಾಭದ ಹಿತಾಸಕ್ತಿಗೆ ಹಾನಿಕಾರಕವಾಗಿದೆ.
ಯಾವುದೇ ಲಾಭವಿಲ್ಲದ್ದಕ್ಕಾಗಿ ಖಾಸಗಿ ಆಪರೇಟರ್‌ಗಳು ಹೋಗದ ಪ್ರದೇಶದಲ್ಲೂ  ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಕೂಡ ಬಿಎಸ್‌ಎನ್‌ಎಲ್ ಯಾವಾಗಲೂ ಸಂವಹನ ಸೇವೆಗಳನ್ನು ಒದಗಿಸುತ್ತಲೇ ಬಂದಿದೆ. ಬಿಎಸ್ಎನ್ಎಲ್ ಜನರಿಗಾಗಿ ಕೆಲಸ ಮಾಡುತ್ತದೆ ಹೊರತೂ ಕೇವಲ ಲಾಭಕ್ಕಾಗಿಯಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆ ಕೇರಳದಲ್ಲಿ ಕೋಝಿಕೋಡ್ ವಿಮಾನದುರಂತ.
ಇದನ್ನೆ ಒಂದು  ಅಳತೆಗೋಲಿನ ಮಾನದಂಡವಾಗಿ ಪರಿಗಣಿಸಿದರೆ, 13 ಲಕ್ಷ ರೈಲ್ವೆ ಕಾರ್ಮಿಕರು, ಎಲ್‌ಐಸಿ, ಕೋಲ್ ಇಂಡಿಯಾ, ವಿದ್ಯುತ್ ಕಾರ್ಮಿಕರು, ಸಾರಿಗೆ ಕಾರ್ಮಿಕರು ಮತ್ತು ಕೋಟಿ ಕೋಟಿ ಇತರ ಕಾರ್ಮಿಕರು ಒದಗಿಸುವ ಸೇವೆಗಳನ್ನು ಖಾಸಗೀಕರಣಗೊಳಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿರುವುದರ ವಿರುದ್ಧ ಸೆಣಿಸುತ್ತಿರುವ,  ಕೋಟ್ಯಂತರ ಕಾರ್ಮಿಕರು ಮತ್ತು ನಂತರ ಮೂರು ರೈತ ವಿರೋಧಿ ಮತ್ತು ಜನ ವಿರೋಧಿ,ಮತ್ತು ಕಾರ್ಪೋರೇಟಗಳ ಪರವಾಗಿರುವ ಕೃಷಿ ಸುಗ್ರಿವಾಜ್ಙೆ  ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೋಟ್ಯಂತರ ರೈತರನ್ನು ರಾಷ್ಟ್ರ ವಿರೋಧಿ ಮತ್ತು ದೇಶದ್ರೋಹಿಗಳೆಂದು ಘೋಷಿಸಬೇಕಾಗುತ್ತದೆ.  ಕಾರ್ಪೊರೇಟ್-ಪರ ಮತ್ತು ವಿದೇಶಿ ಸಂಸ್ಥೆಗಳು ಮತ್ತು ಜನ ವಿರೋಧಿ ನೂತನ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿರುವ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು  ರಾಷ್ಟ್ರ-ವಿರೋಧಿ ಎಂದು ಘೋಷಿಸಬೇಕಾಗುತ್ತದೆ.

ಹಾಗಾದರೆ ಈ ಮಾನದಂಡದ ಪ್ರಕಾರ ಯಾರು ದೇಶಭಕ್ತರಾಗಿ ಉಳಿದಿದ್ದಾರೆ? ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು, ಕಾರ್ಪೊರೇಟ್‌ಗಳು ಮತ್ತು ಕೆಲವು ಅಂಧಭಕ್ತರೇ? ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಜನ-ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಈಗಾಗಲೇ ಹೋರಾಟದಲ್ಲಿರುವ ಜನರನ್ನು ಸೇರಿಕೊಳ್ಳುವ ಮೂಲಕ ಅವರ ಸಾರ್ವತ್ರಿಕ ಬೇಡಿಕೆಗಳೊಂದಿಗೆ ಒಗ್ಗೂಡಿಸಿ ಹೋರಾಟವನ್ನು ಮುಂದುವರೆಸುತ್ತೇವೆ.

ಹಾಗಾಗಿ ಬಿಜೆಪಿ / ಆರ್.ಎಸ್,ಎಸ್. ನ ಸಂಚಿನ ವಿರುದ್ಧ  ಕೋಟಿಗಟ್ಟಲೆ 'ದೇಶದ್ರೋಹಿಗಳು' (?) ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. 

'ಸಂಸದರು ಕೂಡಲೆ ತಮ್ಮ ಹೇಳಿಕೆ ವಾಪಸ್ಸು ಪಡೆದು,ದೇಶದ ಸಾರ್ವಜನಿಕರಂಗದ ಉದ್ಯೋಗಿಗಳ ಮತ್ತು ಜನತೆಯ ಕ್ಷಮೆ ಕೋರಬೇಕೆಂದು ಸಿಐಟಿಯು ಮುಖಂಡರಾದ ತಿಲಕ್ ಗೌಡ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99