![ಲೋಕಸಭಾ ಚುನಾವಣೆಗೆ ಕೈ ರಣತಂತ್ರ: ಮುನಿಯಪ್ಪ, ಹರಿಪ್ರಸಾದ್ ಜೊತೆ ಡಿಕೆಶಿ ಸಭೆ ಲೋಕಸಭಾ ಚುನಾವಣೆಗೆ ಕೈ ರಣತಂತ್ರ: ಮುನಿಯಪ್ಪ, ಹರಿಪ್ರಸಾದ್ ಜೊತೆ ಡಿಕೆಶಿ ಸಭೆ](https://i.ytimg.com/vi/tGn12kpv-z8/hqdefault.jpg)
ಲೋಕಸಭಾ ಚುನಾವಣೆಗೆ ಕೈ ರಣತಂತ್ರ: ಮುನಿಯಪ್ಪ, ಹರಿಪ್ರಸಾದ್ ಜೊತೆ ಡಿಕೆಶಿ ಸಭೆ
ಲೋಕಸಭಾ ಚುನಾವಣೆಗೆ ಕೈ ರಣತಂತ್ರ: ಮುನಿಯಪ್ಪ, ಹರಿಪ್ರಸಾದ್ ಜೊತೆ ಡಿಕೆಶಿ ಸಭೆ
ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಈಗಲೇ ತಯಾರಿ ಆರಂಭಿಸಿದೆ. ಇದರ ಪೂರ್ವಭಾವಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ.
ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಶಿವಕುಮಾರ್ ತಮ್ಮ ನಿವಾಸದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.
ಈ ಮಧ್ಯೆ, ರಾಜ್ಯದಲ್ಲಿ ನಿಗಮ, ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆಯೂ ಚರ್ಚೆ ನಡೆಯಿತು ಎಂದು ಶಿವಕುಮಾರ್ ಹೇಳಿದರು.
ಇನ್ನೊಂದೆಡೆ, ವಿಧಾನ ಪರಿಷತ್ ಚುನಾವಣೆಗೆ ಕೈ ನಾಯಕರು ಸಭೆ ನಡೆಸಿದರು. ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ ಮತ್ತು ಪ್ರಿಯಾಂಕ್ ಖರ್ಗೆ ಸೇರಿ ಎಲ್ಲ ಭಾಗದ ನಾಯಕರೊಂದಿಗೆ ಚರ್ಚೆ ನಡೆಸಿದರು.
ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ಕೈ ನಾಯಕರು ತಿಳಿಸಿದ್ದಾರೆ.