
UDUPI : ಮನುಷ್ಯತ್ವವನ್ನೇ ನಾಚಿಸುವಂತ ಅಮಾನವೀಯ ಘಟನೆಯಿದು..!
ಮನುಷ್ಯತ್ವವನ್ನೇ ನಾಚಿಸುವಂತ ಅಮಾನವೀಯ ಘಟನೆ ಉಡುಪಿ ಕೆಮ್ಮಣ್ಣಿನಲ್ಲಿ ನಡೆದಿದೆ. ಮೃತಪಟ್ಟ ಸಂಗಡಿಗನನ್ನೇ ಕಸದಂತೆ ಎಸೆದು ತೆರಳಿದ ವ್ಯಾಪಾರಿಗಳಿಬ್ಬರ ಹೀನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೊರ ಜಿಲ್ಲೆಯಿಂದ ಉಡುಪಿಯಲ್ಲಿ ಕಲ್ಲಂಗಡಿ ಮಾರುವ ವ್ಯಾಪಾರಿಗಳು ಮೂವರು ಒಂದೇ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಒಬ್ಬ ಮಾರ್ಗ ಮಧ್ಯೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದ್ರೆ ಈ ವೇಳೆ ಮಾನವೀಯತೆ ಮೆರೆದು ಆತನನ್ನು ಆಸ್ಪತ್ರೆಗೆ ಇಲ್ಲವೇ, ಆತನ ಮನೆಗೆ ಮೃತದೇಹವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕಿತ್ತು. ಆದರೆ ಉಳಿದ ಇಬ್ಬರು, ದಾರಿ ಮಧ್ಯೆಯೇ ಮೃತದೇಹವನ್ನು ಎಸೆದು ತೆರಳಿದ್ದಾರೆ. ಈ ಹೀನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.