-->

ಮಂಗಳೂರಿನಲ್ಲಿ ವರ್ಷದ ಕೊನೆಯ ದಿನದಲ್ಲಿ ದುರಂತ-  ಸಮುದ್ರದಲ್ಲಿ ಮುಳುಗಿದ 18 ವರ್ಷದ ಯುವಕ

ಮಂಗಳೂರಿನಲ್ಲಿ ವರ್ಷದ ಕೊನೆಯ ದಿನದಲ್ಲಿ ದುರಂತ- ಸಮುದ್ರದಲ್ಲಿ ಮುಳುಗಿದ 18 ವರ್ಷದ ಯುವಕ

ಮಂಗಳೂರು: 2022 ರ ಕೊನೆಯ ದಿನದಲ್ಲಿ ಮಂಗಳೂರಿನಲ್ಲಿ ದುರಂತ ಸಂಭವಿಸಿದ್ದು 18 ವರ್ಷದ ಯುವಕ ಸಮುದ್ರದಲ್ಲಿ ಮುಳುಗಿದ್ದಾನೆ.

ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ  ಸತ್ಯಂ  (18 ) ಸಮುದ್ರದಲ್ಲಿ ಮುಳುಗಿದ ಯುವಕ. ಈತ ಸುರತ್ಕಲ್ ಎನ್ ಐ ಟಿ ಕೆ ಬೀಚಿಗೆ ಇಂದು ಮಧ್ಯಾಹ್ನ ಗೆಳೆಯ ಪ್ರಭಾಕರ್  ನೊಂದಿಗೆ ಬಂದಿದ್ದ.  ಇವರಿಬ್ಬರು ಸಮುದ್ರದಲ್ಲಿ ಈಜಿ ನೀರಿನ ಸೆಳೆತಕ್ಕೆ ಸಿಲುಕಿದ್ದರು.


ಪ್ರಭಾಕರ್ ಈಜಿ ದಡ ಸೇರಿದ್ದು, ಸತ್ಯಂ ಸಮುದ್ರದಲ್ಲಿ ಕಣ್ಮರೆಯಾಗಿದ್ದಾನೆ. ಈತನ ಪತ್ತೆಗೆ ಸ್ಥಳೀಯ ಮೀನುಗಾರರು ಪ್ರಯತ್ನಿಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99