ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಮಂಗಳೂರಿನಲ್ಲಿ ವರ್ಷದ ಕೊನೆಯ ದಿನದಲ್ಲಿ ದುರಂತ- ಸಮುದ್ರದಲ್ಲಿ ಮುಳುಗಿದ 18 ವರ್ಷದ ಯುವಕ

ಮಂಗಳೂರು: 2022 ರ ಕೊನೆಯ ದಿನದಲ್ಲಿ ಮಂಗಳೂರಿನಲ್ಲಿ ದುರಂತ ಸಂಭವಿಸಿದ್ದು 18 ವರ್ಷದ ಯುವಕ ಸಮುದ್ರದಲ್ಲಿ ಮುಳುಗಿದ್ದಾನೆ.

ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ  ಸತ್ಯಂ  (18 ) ಸಮುದ್ರದಲ್ಲಿ ಮುಳುಗಿದ ಯುವಕ. ಈತ ಸುರತ್ಕಲ್ ಎನ್ ಐ ಟಿ ಕೆ ಬೀಚಿಗೆ ಇಂದು ಮಧ್ಯಾಹ್ನ ಗೆಳೆಯ ಪ್ರಭಾಕರ್  ನೊಂದಿಗೆ ಬಂದಿದ್ದ.  ಇವರಿಬ್ಬರು ಸಮುದ್ರದಲ್ಲಿ ಈಜಿ ನೀರಿನ ಸೆಳೆತಕ್ಕೆ ಸಿಲುಕಿದ್ದರು.


ಪ್ರಭಾಕರ್ ಈಜಿ ದಡ ಸೇರಿದ್ದು, ಸತ್ಯಂ ಸಮುದ್ರದಲ್ಲಿ ಕಣ್ಮರೆಯಾಗಿದ್ದಾನೆ. ಈತನ ಪತ್ತೆಗೆ ಸ್ಥಳೀಯ ಮೀನುಗಾರರು ಪ್ರಯತ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW