![UDUPI : ವೃದ್ದೆಯ ಸರ ಕದಿಯಲು ಯತ್ನಿಸಿದ ಹಾಕಿದ ಮೂವರು ಅಂದರ್ UDUPI : ವೃದ್ದೆಯ ಸರ ಕದಿಯಲು ಯತ್ನಿಸಿದ ಹಾಕಿದ ಮೂವರು ಅಂದರ್](https://lh3.googleusercontent.com/-gEX_6734zCQ/Y0gWqh_iqOI/AAAAAAAAEjQ/2RrdwCGYIUo8mPxmoeC038rqAKIxJ5jFACNcBGAsYHQ/s1600/1665668775466518-0.png)
UDUPI : ವೃದ್ದೆಯ ಸರ ಕದಿಯಲು ಯತ್ನಿಸಿದ ಹಾಕಿದ ಮೂವರು ಅಂದರ್
Thursday, October 13, 2022
ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಲು ಯತ್ನಿಸಿದ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.
ಮೂವರು ಮಂಗಳಮುಖಿಯರಾಗಿದ್ದು, ಕಾರ್ಕಳ ತಾಲೂಕಿನಲ್ಲಿ ಈ ಮಂಗಳಮುಖಿಯರು ಭಿಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಇವರಲ್ಲಿ ಕೆಲವರು ಕಳ್ಳತನದ ಕೃತ್ಯಕ್ಕೆ ಮುಂದಾಗುತ್ತಿದ್ದರು. ವೃದ್ಧೆ ಬಿಲ್ ಪಾವತಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಅವರ ಹಿಂಬದಿಯಲ್ಲಿ ಮೂವರು ಮಂಗಳಮುಖಿಯರು ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ವೃದ್ಧೆ ಬೊಬ್ಬೆ ಹಾಕಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಸುಲಿಗೆಕೋರರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.