UDUPI : ಕುಡಿತ ಮತ್ತಿನಲ್ಲಿ ಯುವಕ ಯುವತಿಯರ ಹುಚ್ಚಾಟ ; ಒಬ್ಬನಿಗೆ ಗಾಯ, ಎರಡು ಕಾರುಗಳು ಜಖಂ

ಕುಡಿದ ಮತ್ತಿನಲ್ಲಿ ಯುವಕನೊಬ್ಬ  ಕಾರನ್ನು ಎರ್ರಾಬಿರ್ರಿ ಚಲಾಯಿಸಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ನಿನ್ನೆ  ರಾತ್ರಿ ಮಣಿಪಾಲದ ಪಬ್‌ಗೆ ಬಂದಿದ್ದ, ಬೆಂಗಳೂರು ಮತ್ತು ಶಿವಮೊಗ್ರದ ಮೂಲದ ನಾಲ್ಕು ಮಂದಿ ಯುವಕರು ಹಾಗೂ ಇಬ್ಬರು ಯುವತಿಯರು,  ತಮ್ಮ ಕಾರಿನಲ್ಲಿ ಹಿಂದಿರುಗುವಾಗ ನಶೆಯಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸಿದ ಪರಿಣಾಮ, ಪಬ್ ನೌಕರ ವಿಕ್ರಾಂತ್‌ ಎಂಬುವವರ ಕಾಲಿಗೆ ಗಾಯ ಉಂಟು ಮಾಡಿ ಪಾರ್ಕಿಂಗ್‌ನಲಿದ್ದ ವಾಹನಗಳನ್ನು ಜಖಂ ಮಾಡಿದ್ದಾರೆ. 




ಚಾಲಕ ಸುಹಾಸ್‌ ವಾಹನ ಚಾಲನೆಯ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದು ದೃಢಪಟ್ಟಿದ್ದು, ಇನ್ನಿತರ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನೋವಾ ಕಾರ್‌ನಲಿದ, ಸುಹಾಸ್ ರವರ ಸ್ನೇಹಿತರಾದ ಭರತ್‌, ನವೀನ್ ಕಲ್ಯಾಣ್‌ ನಿರ್ಮಲ ಕವನ ಎಂಬುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲ..ರೂ ಬೆಂಗಳೂರು ಮತ್ತು ಶಿವಮೊಗ್ರದ ಮೂಲದವರಾಗಿದ್ದು ಬೆಂಗಳೂರಿನಲ್ಲಿ, ಐಟಿ ಸೆಕರ್‌ಲಿ, ನೌಕರಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇವರೆಲ್ಲರೂ ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು ರಾತ್ರಿ ಮಣಿಪಾಲದ ಪಬ್‌ಗೆ ಭೇಟಿ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.