-->
UDUPI ;  ತೆಂಗಿನ ಕಾಯಿ ಹೆಕ್ಕಲು ಹೋಗಿ, ಪಾಲು ಜಾರಿಗೆ ಬಿದ್ದು ವ್ಯಕ್ತಿ ಸಾವು

UDUPI ; ತೆಂಗಿನ ಕಾಯಿ ಹೆಕ್ಕಲು ಹೋಗಿ, ಪಾಲು ಜಾರಿಗೆ ಬಿದ್ದು ವ್ಯಕ್ತಿ ಸಾವು

ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿ ಪಾಳು ಬಾವಿಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆಯಲ್ಲಿ ನಡೆದಿದೆ. ಇಲ್ಲಿನ ಸಮುದಾಯ ಆಸ್ಪತ್ರೆ ಬಳಿಯ ನಿವಾಸಿ  ಅಚ್ಚುತ.ಎಂ (59) ಸಾವನ್ಪಿದ ವ್ಯಕ್ತಿ.
ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಅಚ್ಚುತ.ಎಂ ಅವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಮನೆಯ ಪಕ್ಕದ ನಾಗಪ್ಪ ಶೇರುಗಾರ ಎಂಬುವವರ ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಹೆಕ್ಕಲು ಹೋಗಿದ್ದರು. ಈ ವೇಳೆ ಪಾಳುಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article