![UDUPI : ದೇವಿಯ ಚಿನ್ನಾಭರಣ ದೋಚಿದ ದುರುಳರು UDUPI : ದೇವಿಯ ಚಿನ್ನಾಭರಣ ದೋಚಿದ ದುರುಳರು](https://lh3.googleusercontent.com/-lqWL5-JKhn4/Yu1Jyfc5uKI/AAAAAAAADMc/aSwerzo3Bkcc9phJX_6nwewsccqnqxLxgCNcBGAsYHQ/s1600/1659718080531290-0.png)
UDUPI : ದೇವಿಯ ಚಿನ್ನಾಭರಣ ದೋಚಿದ ದುರುಳರು
Friday, August 5, 2022
ಉಡುಪಿ ಜಿಲ್ಲೆಯ ಹೆಬ್ರಿಯ ಶಿವಪುರದ ಗ್ರಾಮದ ಬ್ಯಾಣದಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ಚಿನ್ನಾಭರಣ ಕಳವುಗೈದಿದ್ದಾರೆ.
ದೇವಸ್ಥಾನದ ಎದುರಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ದೇವಿಯ ಮೂರ್ತಿಗೆ ಹಾಕಿರುವ ಚಿನ್ನದ ಕರಿಮಣಿ, 3 ಚಿನ್ನದ ಸಣ್ಣ ಸರ ಹಾಗೂ ಚಿನ್ನದ ತಾಳಿ ಇರುವ ಬೆಳ್ಳಿಯ ಸರ ಹಾಗೂ ಎರಡು ಕಾಣಿಗೆ ಡಬ್ಬಿಗಳನ್ನು ಕಳವು ಮಾಡಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 60,000ರೂ. ಅಂತ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.